Untitled Document
Sign Up | Login    
Dynamic website and Portals
  
January 18, 2015

ಗಣರಾಜ್ಯೋತ್ಸವ ಹಿನ್ನಲೆ: ದೇಶಾದ್ಯಂತ ಹೈಅಲರ್ಟ್

ನವದೆಹಲಿ : ಜನವರಿ 26ರ ಗಣರಾಜ್ಯೋತ್ಸವ ಸಂಭ್ರಮಾಚರಣೆಗೆ ಉಗ್ರರು ದೇಶದ ವಿವಿಧೆಡೆಗಳಲ್ಲಿ ದಾಳಿ ನಡೆಸಲು ಯೋಜಿಸಿದ್ದಾರೆ ಎಂಬ ಗುಪ್ತಚರ ಮಾಹಿತಿಗಳ ಹಿನ್ನಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಇದಲ್ಲದೆ ಈ ಬಾರಿಯ ಗಣರಾಜ್ಯೋತ್ಸವ ಪೆರೇಡ್‌ ವೀಕ್ಷಿಸಲು ಅಮೆರಿಕಾ ಅಧ್ಯಕ್ಷ ಬರಾಕ್‌ ಒಬಾಮ ವಿಶೇಷ ಅತಿಥಿಯಾಗಿ ಭಾರತಕ್ಕೆ ಆಗಮಿಸುತ್ತಿರುವುದರಿಂದ ಸಹಜವಾಗಿಯೇ ಗುಪ್ತಚರ ಇಲಾಖೆ, ಭದ್ರತಾ ಪಡೆಗಳು ಮತ್ತು ಪೊಲೀಸ್‌ ಇಲಾಖೆಗಳ ಮೇಲೆ ಒತ್ತಡ ಅತಿಯಾಗಿದೆ.

ಇನ್ನು ಗಡಿಭಾಗದಲ್ಲಿ ದುಷ್ಕರ್ಮಿಗಳು ದಾಳಿನಡೆಸುವ ಸಾಧ್ಯತೆಗಳಿರುವುದರಿಂದ ಈ ಭಾಗಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.

ಈಗಾಗಲೇ ಗುಪ್ತಚರ ಇಲಾಖೆಗೆ ನೀಡಿರುವ ಮಾಹಿತಿಯಂತೆ ಸುಮಾರು 200 ಉಗ್ರರು ಗಡಿಭಾಗದಿಂದ ಭಾರತದೊಳಗೆ ನುಗ್ಗುವ ಹವಣಿಕೆಯಲ್ಲಿದ್ದಾರೆ ಎಂಬ ವಿಷಯ ನಿಜವಾಗಿಯೂ ಆತಂಕಕಾರಿಯಾಗಿದೆ.

ಹೈಪ್ರೊಫೈಲ್‌ ರಾಜಕೀಯ ನಾಯಕರೊಬ್ಬರು ಭಾರತದ ಗಣರಾಜ್ಯೋತ್ಸವ ಪೆರೇಡ್‌ ವೀಕ್ಷಣೆಗೆ ಆಗಮಿಸುತ್ತಿರುವುದು ಇದೇ ಮೊದಲಾಗಿರುವುದರಿಂದ ದೇಶಾದ್ಯಂತ ವಿಧ್ವಂಸಕ ಕೃತ್ಯಗಳ ಮೂಲಕ ಅಭದ್ರತೆಯ ಭಾವನೆ ಉಂಟುಮಾಡುವುದು ಉಗ್ರರ ಮೂಲ ಯೋಜನೆಯಾಗಿದೆ ಎನ್ನಲಾಗುತ್ತಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited