ನವದೆಹಲಿ : ಭಾರತೀಯರು ನನ್ನ ಗುರುಗಳು ಎಂದು ಟಿಬೇಟ್ ನ ಧರ್ಮಗುರು ದಲೈಲಾಮ ಹೇಳಿದ್ದಾರೆ. ಭಾರತ ಭವ್ಯ ಪರಂಪರೆಯ ನಾಡಾಗಿದ್ದು ಭಾರತೀಯರು ಪ್ರಾಚೀನತೆಯಲ್ಲಿ ನನ್ನ ಗುರುಗಳೆಂದು ದಲೈಲಾಮ ಹೇಳಿಕೆ ನೀಡಿದ್ದಾರೆ.
ಜ.1ರಂದು ಗುಜರಾತ್ ಗೆ ಭೇಟಿ ನೀಡಿ ಮಾತನಾಡಿದ ದಲೈಲಾಮ, ನನ್ನ ಮನಸ್ಸಲ್ಲಿ ನಳಂದಾದಲ್ಲಿನ ಯೋಚನೆಗಳೇ ತುಂಬಿವೆ. ನಳಂದಾ ವಿಶ್ವವಿದ್ಯಾನಿಲಯ ಭಾರತದ ಪುರಾತನ ವಿದ್ಯಾಲಯ. ಆದ್ದರಿಂದ ಸಂಸ್ಕೃತಿಯಲ್ಲೂ ಭಾರತೀಯರು ನನ್ನ ಗುರುಗಳು ಎಂದು ದಲೈಲಾಮ ಅಭಿಪ್ರಾಯಪಟ್ಟಿದ್ದಾರೆ.
ನಾವು ಭಾರತೀಯರ ಶಿಷ್ಯರು. ನಾನೊಬ್ಬ ಸಾಮಾನ್ಯ ಶಿಷ್ಯನಾಗಿದ್ದು, ನನ್ನ ಗುರುಗಳಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ದಲೈಲಾಮಾ ನುಡಿದಿದ್ದಾರೆ. ಸಾಮಾಜಿಕ ಕಾರ್ಯಗಳಿಗಾಗಿ ನೀಡಲ್ಪಡುವ ಸಂತೋಕ್ಬಾ ಪ್ರಶಸ್ತಿಯನ್ನು ಸ್ವೀಕರಿಸುವುದಕ್ಕಾಗಿ ದಲೈಲಾಮ ಸೂರತ್ ಗೆ ಎರಡು ದಿನಗಳ ಭೇಟಿ ನೀಡಿದ್ದಾರೆ.