Untitled Document
Sign Up | Login    
Dynamic website and Portals
  
December 22, 2014

ಒಡೆಯರ್ ವಂಶದ ಉತ್ತರಾಧಿಕಾರಿಯಾಗಿ ಗಾಯತ್ರಿ ದೇವಿ ಮೊಮ್ಮಗ ಯದುವೀರ್ ನೇಮಕ ಸಾಧ್ಯತೆ

ಮೈಸೂರು ಸಿಂಹಾಸನ ಮೈಸೂರು ಸಿಂಹಾಸನ

ಮೈಸೂರು : 'ಮೈಸೂರು ರಾಜವಂಶ'ಕ್ಕೆ ಶೀಘ್ರವೇ ಉತ್ತರಾಧಿಕಾರಿ ನೇಮಕ ನಡೆಯಲಿದೆ. ಜಯಚಾಮರಾಜ ಒಡೆಯರ್ ಅವರ ಪುತ್ರಿ ಹಾಗೂ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ಗಾಯತ್ರಿದೇವಿ ಅವರ ಮಗಳ ಮಗ ಯದುವೀರ ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸುವುದು ಬಹುತೇಕ ಖಚಿತವಾಗಿದೆ.

ಗಾಯತ್ರಿದೇವಿ ಅವರ ಮೊದಲ ಮಗಳಾದ ಲೀಲಾ- ಸ್ವರೋಪ್ ದಂಪತಿಯ ಮೊದಲ ಮಗ ಯದುವೀರ್. ಇವರು ವಿದೇಶದಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಕಳೆದ ವರ್ಷದ ಡಿ.10ರಂದು ನಿಧನದ ಬಳಿಕ ಉತ್ತರಾಧಿಕಾರಿ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಒಡೆಯರ್ ಅವರ ಉತ್ತರ ಕ್ರಿಯೆಗಳನ್ನು ನೆರವೇರಿಸಿದ್ದ ಚದುರಂಗ ಕಾಂತರಾಜ ಅರಸ್ ಅವರೇ ಯದುವಂಶದ ಮುಂದಿನ ಉತ್ತರಾಧಿಕಾರಿ ಎಂದು ಹೇಳಲಾಗಿತ್ತು. ಆದರೆ ಈಗ ಕಾಂತರಾಜ್ ಅರಸ್ ಅವರ ಸಹೋದರಿಯ ಪುತ್ರನನ್ನು ಒಡೆಯರ್ ವಂಶಕ್ಕೆ ದತ್ತು ಪಡೆಯಲು ಸಿದ್ಧತೆ ನಡೆದಿವೆ.

ಯದುವಂಶದ ನಿಯಮದಂತೆಯೇ ಉತ್ತರಾಧಿಕಾರಿ ನೇಮಕ ಆಗಬೇಕು. ಚದುರಂಗ ಕಾಂತರಾಜ ಅರಸ್‌ ಗೆ ಈಗಗಾಲೇ ಮದುವೆ ಆಗಿರುವುದರಿಂದ ನಿಯಮದಂತೆ ಅವರು ಉತ್ತರಾಧಿಕಾರಿಯಾಗಲು ಅರ್ಹರಲ್ಲ ಎಂಬ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಈಗ ಪ್ರಮೋದಾದೇವಿ ಒಡೆಯರ್ ಅವರು ಯದುವೀರ ಅವರನ್ನೇ ಉತ್ತರಾಧಿಕಾರಿ ಸ್ಥಾನಕ್ಕೆ ನೇಮಿಸುವ ಒಲವು ವ್ಯಕ್ತಪಡಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Religion & Spirituality

ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
  • ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
  • ಶಬರಿಮಲೈ ದೇಗುಲಕ್ಕೆ ಮಹಿಳೆಯ ಪ್ರವೇಶ ಕುರಿತಾದ ಆರ್ಜಿಯನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.
  • ವೈಭವದ ದಸರಾ ಮಹೋತ್ಸವ: ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿ
  • ನಂದಿಧ್ವಜಕ್ಕೆ ಸಿಎಂ ಪೂಜೆ: ಜಂಬೂಸವಾರಿಗೆ ಚಾಲನೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited