ಶ್ರೀನಗರ : ಇತ್ತೀಚಿನ ಉಗ್ರರ ದಾಳಿಯ ಘಟನೆಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ಜಮ್ಮು-ಕಾಶ್ಮೀರ ಚುನಾವಣಾ ರ್ಯಾಲಿಗೆ ವೇದಿಕೆ ಸಿದ್ಧವಾಗಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ.
ಭಯೋತ್ಪಾದಕ ದಾಳಿಯಿಂದ ನಲುಗಿರುವ ಕಾಶ್ಮೀರದ ಶ್ರೀನಗರದಲ್ಲಿ ಪೂರ್ವ ನಿಗದಿಯಂತೆ ಸೋಮವಾರ ಮೋದಿ ಅವರ ಚುನಾವಣಾ ರ್ಯಾಲಿ ನಡೆಯಲಿದೆ. ಇಲ್ಲಿನ ಶೇರ್-ಎ-ಕಾಶ್ಮೀರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೋದಿ ಚುನಾವಣಾ ಭಾಷಣ ಮಾಡಲಿದ್ದು, ಭದ್ರತಾ ಪಡೆಯ ಹೆಲಿಕಾಪ್ಟರ್ಗಳು ಕ್ರೀಡಾಂಗಣದ ಮೇಲೆ ಕಣ್ಗಾವಲು ವಹಿಸಲಿವೆ.
ಸಿಆರ್ಪಿಎಫ್, ಪ್ಯಾರಾ ಮಿಲಿಟರಿ ಸೇರಿದಂತೆ ಪೊಲೀಸ್ ಪಡೆಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ರ್ಯಾಲಿ ಸಾಗುವ ಹಾದಿ, ಕ್ರೀಡಾಂಗಣಕ್ಕೆ ಭಾರೀ ಭದ್ರತೆ ನೀಡಲಾಗಿದೆ.
ಈ ನಡುವೆ ಜಮ್ಮು-ಕಾಶ್ಮೀರದಲ್ಲಿ ಮಂಗಳವಾರ 3ನೇ ಹಂತದ ಮತದಾನ ನಡೆಯಲಿದ್ದು, ಕಾಶ್ಮೀರದ ಪುಲ್ವಾಮ ಜಿಲ್ಲೆಯ ತ್ರಾಲ್ ಕ್ಷೇತ್ರದ ನೂರ್ಪುರ ಎಂಬಲ್ಲಿ ಮತಗಟ್ಟೆಯೊಂದರ ಮೇಲೆ ಭಾನುವಾರ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಯೋಧನೊಬ್ಬ ಗಾಯಗೊಂಡಿದ್ದಾನೆ. ಯಾವುದೇ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.