ನವದೆಹಲಿ : ಭಾರತದ ಗಡಿಯೊಳಗೆ ರಸ್ತೆಗಳನ್ನು ನಿರ್ಮಿಸದಂತೆ ಚೀನಾಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಒಂದು ವೇಳೆ ಚೀನಾ ಭಾರತದ ಗಡಿಯೊಳಗೆ ರಸ್ತೆ ನಿರ್ಮಿಸಿದರೆ ಅದನ್ನು ಧ್ವಂಸ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಅತಿಕ್ರಮಣ ಮಾಡುತ್ತಿರುವ ಚೀನಾಗೆ ರಾಜನಾಥ್ ಸಿಂಗ್ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ.
ನಾವು ಚೀನಾದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತೇವೆ. ಭಾರತದ ಗಡಿಯೊಳಗೆ ರಸ್ತೆಗಳನ್ನು ನಿರ್ಮಾಣ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು ಈ ಮೂಲಕ ಚೀನಾ ಸಹ ನಮ್ಮೊಂದಿಗೆ ಉತ್ತಮ ಸ್ನೇಹ ಬೆಳೆಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ಎಚ್ಚರಿಕೆ ಹೊರತಾಗಿಯೂ, ಚೀನಾ ರಸ್ತೆ ನಿರ್ಮಾಣ ಕಾಮಗಾರಿಯನ್ನು ಮುಂದುವರೆಸಿದರೆ ಅದನ್ನು ನೋಡುತ್ತಾ ನಾವು ಕೈ ಕಟ್ಟಿ ಕೂರುವುದಿಲ್ಲ. ಅಂತಹ ನಿರ್ಮಾಣ ಕಾಮಗಾರಿಗಳನ್ನು ಧ್ವಂಸ ಮಾಡಲಾಗುವುದು. ಅದನ್ನು ಬಿಟ್ಟು ನಮ್ಮಗೆ ಬೇರೆ ದಾರಿಯಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.