ರಾಯಪುರ : ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಗಾದ8 ಜನ ಮಹಿಳೆಯರು ಸಾವನ್ನಪ್ಪಿರುವ ಘಟನೆ ಛತ್ತೀಸ್ ಗಢದ ಬಿಲಾಸ್ ಪುರ್ ನಲ್ಲಿ ನಡೆದಿದೆ.
ಇಲ್ಲಿನ ಪೆಂಡಾರಿ ಕ್ಷೇತ್ರದಲ್ಲಿ ನ.8ರಂದು ರಾಜ್ಯಸರ್ಕಾರದ ವತಿಯಿಂದ ಸಂತಾನ ಹರಣ ಶಸ್ತ್ರಚಿಕಿತ್ಸಾ ಕ್ಯಾಂಪ್ ಆಯೋಜಿಸಲಾಗಿತ್ತು. ಈ ವೇಳೆ ಚಿಕಿತ್ಸೆ ಪಡೆದ 8 ಮಹಿಳೆಯರು ಸಾವನ್ನಪ್ಪಿದರೆ 15ಕ್ಕೂ ಹೆಚ್ಚು ಮಹಿಳೆಯರು ಅಸ್ವಸ್ಥರಾಗಿದ್ದಾರೆ.
ಘಟನೆಗೆ ವೈದ್ಯರ ನಿರ್ಲಕ್ಷವೇ ಕಾರಣವೆಂದು ತಿಳಿದುಬಂದಿದೆ. ಆದರೆ ವೈದ್ಯಾಧಿಕಾರಿಗಳು ಈ ಆರೋಪ ತಳ್ಳಿಹಾಕಿದ್ದಾರೆ. ಪೆಂಡಾರಿ ಪ್ರದೇಶವು ಆರೋಗ್ಯ ಸಚಿವರಾದ ಅಮರ್ ಅಗರ್ವಾಲ್ ಅವರ ಕ್ಷೇತ್ರವಾಗಿರುವುದು ವಿಪರ್ಯಾಸವಾಗಿದೆ.
ಸಾವಿಗೀಡಾದ ಕುಟುಂಬಕ್ಕೆ ಛತ್ತೀಸ್ಗಡ ಸರ್ಕಾರ ತಲಾ 2 ಲಕ್ಷ ರೂಪಾಯಿ ಪರಾಹಾರ ನೀಡುವುದದಾಗಿ ಘೋಷಿಸಿದ್ದು, ಅಸ್ವಸ್ಥರಾಗಿರುವ ಮಹಿಳೆಯರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದೆ.
ಇದೇ ವೇಳೆ ವೈದ್ಯರ ನಿರ್ಲಕ್ಷದ ವಿರುದ್ಧ ತನಿಖೆಗೆ ಮೂವರು ತಜ್ನರ ಸಮಿತಿ ರಚಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶ ನೀಡಿದೆ.