ನವದೆಹಲಿ : ಆಮ್ ಆದ್ಮಿ ಪಕ್ಷದ ವೆಬ್ ಸೈಟ್ ನಲ್ಲಿ ಮೋದಿ ಭಾವಚಿತ್ರ ಪಕಟಿಸುವ ಮೂಲಕ ಪ್ರಚಾರ ನಡೆಸಿ ದೇಶಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದ್ದ ಆಮ್ ಆದ್ಮಿ ಪಕ್ಷ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದೆ. ನಮ್ಮ ಪಕ್ಷದ ವೆಬ್ ಸೈಟ್ ನಲ್ಲಿ ಪ್ರಕಟವಾಗಿದ್ದ ಸ್ಲೋಗನ್ ಹೊರಗಿನವರ ಕುತಂತ್ರ ಪಕ್ಷಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದೆ.
ಪಕ್ಷದ ವೆಬ್ ಸೈಟನ್ನು ಯಾರೋ ಅತಿಕ್ರಮಣ ಮಾಡಿದ್ದು ನರೇಂದ್ರ ಮೋದಿ ಭಾವಚಿತ್ರ ಹಾಕಿದ್ದಾರೆ ಎಂದು ಸಮರ್ಥನೆ ನೀಡಿದೆ. ಮೋದಿ ಭಾವಚಿತ್ರ ಬಳಸಿ ಪ್ರಧಾನಿ ಗಾಗಿಗೆ ಮೋದಿ, ಸಿ.ಎಂ ಗಾದಿಗೆ ಅರವಿಂದ್ ಕೇಜ್ರಿವಾಲ್(ಮೋದಿ ಫಾರ್ ಪಿ.ಎಂ, ಅರವಿಂದ್ ಕೇಜ್ರಿವಾಲ್ ಫಾರ್ ಸಿ.ಎಂ) ಎಂಬ ಘೋಷ ವಾಕ್ಯ ವಳಸಿದ್ದಕ್ಕೆ ಆಪ್ ವಿರುದ್ಧ ದೇಶಾದ್ಯಂತ ತೀವ್ರ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಆಪ್ ಪ್ರತಿಕ್ರಿಯಿಸಿದ್ದು ಇದು ಪಕ್ಷ ವಿರೋಧಿಗಳ ಕುತಂತ್ರ ಎಂದು ಹೇಳಿದೆ.
ಮಹಾರಾಷ್ಟ್ರ, ಹರ್ಯಾಣ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ದೆಹಲಿ ಚುನಾವಣೆ ಎದುರಿಸುವಂತೆ ಬಿಜೆಪಿಗೆ ಸವಾಲು ಹಾಕಿದ್ದರು. ಆದರೆ ಚುನಾವಣೆ ನಡೆಯುವುದು ಖಾತ್ರಿಯಾಗುತ್ತಿದ್ದಂತೆ ತಮ್ಮ ಪರ ಪ್ರಚಾರಕ್ಕೆ ಪ್ರಧಾನಿ ಮೋದಿ ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ಆಮ್ ಆದ್ಮಿ ಪಕ್ಷದ ವೆಬ್ ಸೈಟ್ ನಲ್ಲಿ ಪ್ರಚಾರ ಆರಂಭಿಸಿರುವ ಅರವಿಂದ್ ಕೇಜ್ರಿವಾಲ್, ಪ್ರಧಾನಿ ಗಾದಿಗೆ ಮೋದಿ, ಸಿ.ಎಂ ಗಾದಿಗೆ ಅರವಿಂದ್ ಕೇಜ್ರಿವಾಲ್ ಎಂದು ದೆಹಲಿಯ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ(ಡೆಲ್ಲಿ ಸ್ಪೀಕ್ಸ್, ಮೋದಿ ಫಾರ್ ಪಿ.ಎಂ, ಅರವಿಂದ್ ಕೇಜ್ರಿವಾಲ್ ಫಾರ್ ಸಿ.ಎಂ) ಎಂಬ ಘೋಷವಾಕ್ಯ ಅಪ್ ಡೇಟ್ ಮಾಡಿ ಅಚ್ಚರಿ ಮೂಡಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ತಕ್ಷಣವೇ ಅದನ್ನು ತೆಗೆದು ಹಾಕಲಾಗಿತ್ತು.