ನವದೆಹಲಿ : ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ಬಕ್ರಿದ್ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಮುಸ್ಲಿಮರಿಗೆ ಶುಭಾಷಯ ತಿಳಿಸಿದ್ದಾರೆ.
ಈ ಸಾಲಿನ ಬಕ್ರಿದ್ ಹಬ್ಬ ಸಮಾಜದಲ್ಲಿ ಸಾಮರಸ್ಯ ಮತ್ತು ಸಹಾನುಭೂತಿಯನ್ನು ಹೆಚ್ಚು ಮಾಡಲಿ ಎಂದು ಪ್ರಧಾನಿ ಹೇಳಿದ್ದಾರೆ.
ಬಲಿದಾನದ ಸಂಕೇತವಾಗಿ ಮುಸ್ಲಿಮರು ಬಕ್ರಿದ್ ಹಬ್ಬವನ್ನು ಆಚರಿಸುತ್ತಾರೆ. 'ಅಲ್ಲಾ' ಆದೇಶ ಪಾಲಿಸುವುದಕ್ಕಾಗಿ ಪ್ರವಾದಿ ಇಬ್ರಾಹಿಂ ತನ್ನ ಮಗನನ್ನೇ ಬಲಿ ಕೊಟ್ಟ ಹಿನ್ನೆಲೆಯಲ್ಲಿ ಬಕ್ರಿದ್ ಆಚರಿಸಲಾಗುತ್ತದೆ. ಹಬ್ಬದ ಸಲುವಾಗಿ ಪ್ರಾಣಿ ಬಲಿಯನ್ನು ನಿರ್ವಹಿಸುವುದರ ಮೂಲಕ ಮನುಷ್ಯ ದೇವಾದೇಶಗಳಿಗೆ ಆದ್ಯತೆ ನೀಡಬೇಕೆಂಬ ಕರೆಯನ್ನು ಬಕ್ರಿದ್ ಹಬ್ಬ ಸಾರುತ್ತದೆ.
ಅ.6ರಂದು ದೇಶಾದ್ಯಂತ ಬಕ್ರಿದ್ ನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.