ಬೆಂಗಳೂರು : ದೇಶದಲ್ಲಿನ ಕೊಳೆ ನಿವಾರಣೆಗಾಗಿ ಸ್ವಚ್ಛತಾ ಆಂದೋಲನ ನಡೆಸಲು ಪ್ರತಿಯೊಬ್ಬರೂ ಸಂಕಲ್ಪ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೇಶದ ಜನರಲ್ಲಿ ನಾನು ಭಿಕ್ಷೆ ಬೇಡುತ್ತೇನೆ. ವರ್ಷದಲ್ಲಿ ನಿಮ್ಮ 100 ಗಂಟೆಗಳನ್ನು ಕೊಡಿ. ಅಂದರೆ, ಹೆಚ್ಚೂ ಕಡಿಮೆ ವಾರಕ್ಕೆ 2 ಗಂಟೆಗಳು. ಸ್ವಚ್ಛತೆಯ ಆಂದೋಲನ ನಡೆಸುವ ಮೂಲಕ ದೇಶದಲ್ಲಿನ ಕೊಳೆಯನ್ನು ಅಳಿಸಿ ಹಾಕೋಣ ಎಂದರು.
ಅ.2ರಂದು ಗಾಂಧಿ ಜಯಂತಿ ದಿನದಂದು ಪೊರಕೆ ಹಿಡಿದು ಸ್ವಚ್ಛತೆ ಕೈಗೊಳ್ಳುವ ಮೂಲಕ ಆಂದೋಲನಕ್ಕೆ ಚಾಲನೆ ನೀಡುವುದಾಗಿ ತಿಳಿಸಿದರು.
ಭಾರತ ಮಾತೆಯನ್ನು ಕೊಳೆಯಿಂದ ಮುಕ್ತಗೊಳಿಸಬೇಕಾಗಿದೆ. ಆಕೆಯ ಸೇವೆ ಮಾಡಲು ಸ್ವಾತಂತ್ರ್ಯ ಹೋರಾಟಗಾರರಂತೆ ಅಹೋರಾತ್ರಿ ಹೋರಾಡಬೇಕಿಲ್ಲ, ಗಲ್ಲಿಗೇರುವ ಸಂದರ್ಭವೂ ಬೇಕಾಗಿಲ್ಲ. ಆದರೆ ಸ್ವಚ್ಛತೆ ಕಾಪಾಡಿದರೆ ಭಾರತ ಮಾತೆಯ ಸೇವೆ ಮಾಡಿದಂತೆಯೇ ಎಂದು ತಿಳಿಸಿದರು.