ನವದೆಹಲಿ : 'ಭಾರತೀಯ ಮೀನುಗಾರ'ರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಇಟಾಲಿಯ ಹಡಗಿನ ಸಿಬ್ಬಂದಿ ಮಾಸ್ಸಿಮಿಲಿಯಾನೊ ಲಾಟೋರ್ ಗೆ 4 ತಿಂಗಳ ಕಾಲ ಇಟಲಿ ತೆರಳಲು ಸುಪ್ರೀಂ ಕೋರ್ಟ್ ಸೆ.12ರಂದು ಆದೇಶ ನೀಡಿದೆ.
ಮಾಸ್ಸಿಮಿಲಿಯಾನೊ ಲಾಟೋರ್, ಅವಧಿ ಮುಕ್ತಾಯಗೊಂಡ ಬೆನ್ನಲ್ಲೇ ಭಾರತಕ್ಕೆ ವಾಪಸ್ ಬರುವುದಾಗಿ ಘೋಷಿಸಿದರೆ ಮಾತ್ರ ಈ ಆದೇಶ ಜಾರಿಗೆ ಬರಲಿದೆ ಎಂದು ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಾಧೀಶ ಆರ್.ಎಂ ಲೋಧ, ನೇತೃತ್ವದ ಪೀಠ ಪೀಠ ತಿಳಿಸಿದೆ. ಲಾಟೋರ್ ವಾಪಸಾತಿ ಬಗ್ಗೆ ಇಟಾಲಿಯ ರಾಯಭಾರಿ ಕಚೇರಿ ಭರವಸೆ ನೀಡಲಿದೆ ಎಂದು ಇಟಾಲಿ ನೌಕಾ ಸಿಬ್ಬಂಧಿ ಪರ ವಕೀಲರು ಕೋರ್ಟ್ ಗೆ ತಿಳಿಸಿದ್ದಾರೆ.
ಕೇರಳದಲ್ಲಿ ಇಟಲಿ ನೌಕೆಯ ಸಿಬ್ಬಂದಿ, ಭಾರತೀಯ ಮೀನುಗಾರ ಹತ್ಯೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯ ಸಾರ್ಜೆಂಟ್ ಮಾಸ್ಸಿಮಿಲಿಯಾನೊ ಲಾಟೋರ್ ಮತ್ತು ಸಾರ್ಜೆಂಟ್ ಸಾಲ್ವಟೋರ್ ಗಿರೋನ್ ನ್ನು ಫೆ.2012ರಲ್ಲಿ ಬಂಧಿಸಲಾಗಿತ್ತು.
ಆರೋಪಿ ಲಾಟೋರ್ ವಾರಕ್ಕೊಮ್ಮೆ ಪೊಲೀಸ್ ಠಾಣೆಗೆ ಬಂದು ಸಹಿ ಮಾಡಾಬೇಕಿತ್ತು. ಆದರೆ ಆ.31ರಂದು ಮೆದುಳಿನ ಪಾರ್ಶ್ವವಾಯುಗೀಡಾಗಿದ್ದರಿಂದ ಸೆ.8ರಿಂದ ಆತನಿಗೆ 2 ವಾರಗಳ ಕಾಲ ಖುದ್ದು ಹಾಜರಿಂದ ವಿನಾಯಿತಿ ನೀಡಲಾಗಿತ್ತು. ಇದೀಗ ಲಾಟೋರ್ ಗೆ 4 ತಿಂಗಳ ಕಾಲ ಇಟಾಲಿಗೆ ತೆರಳಲು ಅನುಮತಿ ನೀಡಲಾಗಿದೆ.