Untitled Document
Sign Up | Login    
Dynamic website and Portals
  
August 25, 2014

ಮಧ್ಯಪ್ರದೇಶದಲ್ಲಿ ಕಾಲ್ತುಳಿತ 10ಕ್ಕೂ ಹೆಚ್ಚು ಭಕ್ತಾಧಿಗಳು ಸಾವು

ನವದೆಹಲಿ : 'ಮಧ್ಯಪ್ರದೇಶ'ದಲ್ಲಿರುವ ಚಿತ್ರಕೂಟ ದೇವಾಲಯದಲ್ಲಿ ಕಾಲ್ತುಳಿತ ಉಂಟಾಗಿದ್ದು 10 ಜನರು ಮೃತಪಟ್ಟಿದ್ದು 12ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಧ್ಯಪ್ರದೇಶ- ಉತ್ತರ ಪ್ರದೇಶದ ಮಧ್ಯಭಾಗದಲ್ಲಿ ಹರಡಿರುವ ವಿಂಧ್ಯ ಪರ್ವತ ಶ್ರೇಣಿಯ ಉತ್ತರ ಭಾಗದಲ್ಲಿ ಚಿತ್ರಕೂಟ ದೇವಾಲಯವಿದೆ.

ಸತ್ನಾ ಜಿಲ್ಲಾಧಿಕಾರಿ ಕಾಲ್ತುಳಿತ ಪ್ರಕರಣವನ್ನು ನ್ಯಾಯಾಧೀಶರ ತನಿಖೆ (magisterial inquiry)ಗೆ ಆದೇಶಿಸಿದ್ದಾರೆ. ಸೋಮವತಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಚಿತ್ರಕೂಟದ ಭರತ್ ಮಿಲಾಪ್ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಪೂಜೆ ಅಂಗವಾಗಿ 'ಶಯನ ಪ್ರದಕ್ಷಿಣೆ' ನಡೆಸುವ ಸಂದರ್ಭದಲ್ಲಿ ಭಕ್ತಾದಿಗಳು ಕಾಲ್ತುಳಿತಕ್ಕೆ ಸಿಲುಕಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಚಿತ್ರಕೂಟಕ್ಕೆ ರಾಮಾಯಣ ಕಾಲದ ಐತಿಹ್ಯವಿದ್ದು ರಾಮ-ಸೀತಾ ಮತ್ತು ಲಕ್ಷ್ಮಣ ತಮ್ಮ ವನಸವಾಸದ ಹದಿನಾಲ್ಕು ವರ್ಷಗಳಲ್ಲಿನ ಹನ್ನೊಂದುವರೆ ವರ್ಷಗಳ ಕಾಲ ಚಿತ್ರಕೂಟದ ಕಣಿವೆಯಲ್ಲಿ ಕಳೆದರು ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಚಿತ್ರಕೂಟದಲ್ಲಿನ ಹಿಂದೂ ದೇವಾಲಯಗಳು ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗಿವೆ.

ಅನೇಕ ಜನರು ಪ್ರತಿ ಅಮಾವಾಸ್ಯೆಯೂ ಇಲ್ಲಿ ಒಂದುಗೂಡುತ್ತಾರೆ. ಸೋಮವತಿ ಅಮಾವಾಸ್ಯೆ , ದೀಪಾವಳಿ, ಶರದ್-ಪೂರ್ಣಿಮ, ಮಕರ ಸಂಕ್ರಾಂತಿ ಮತ್ತು ರಾಮನವಮಿ ಇಂತಹ ವಿಶೇಷ ಸಂದರ್ಭಗಳಲ್ಲಿ ಚಿತ್ರಕೂಟದಲ್ಲಿನ ದೇವಾಲಯಗಳಲ್ಲಿ ವಿಶೇಷ ಆಚರಣೆಗಳು ನಡೆಯಲಿದ್ದು ಭಕ್ತಾದಿಗಳು ಸಹಸ್ರಸಹಸ್ರ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.

2013ರ ಅ.13ರಂದೂ ಸಹ ಮಧ್ಯಪ್ರದೇಶದಲ್ಲಿ ಇಂತದ್ದೇ ಕಾಲ್ತುಳಿತ ಸಂಭವಿಸಿ 115ಕ್ಕೂ ಹೆಚ್ಚು ಜನ ಮೃತಪಟ್ಟು 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited