ರಾಮನಗರ : 'ರಾಮನಗರ'ದ ಅರ್ಕೇಶ್ವರ ದೇವಾಲಯಕ್ಕೆ ಅನ್ಯ ಕೋಮಿನ ಯುವಕನೊಬ್ಬ ನುಗ್ಗಿ ದಾಂಧಲೆ ಮಾಡಿದ ಘಟನೆ ಆ.10ರಂದು ಬೆಳಕಿಗೆ ಬಂದಿದೆ.
ರಾಮನಗರದ ರೆಹಮತ್ ಎಂಬ ಯುವಕ ಆ.9ರಂದು ರಾತ್ರಿ ದೇವಾಲಯದ ಬೀಗ ಮುರಿದು ಒಳಕ್ಕೆ ನುಗ್ಗಿ ದೇವಾಲಯ ಗೋಪುರ ಹಾಗೂ ಕಳಶ, ಗಂಟೆಗಳನ್ನು ಹಾಳುಗೆಡವಿದ್ದಾನೆ. ದೇವಾಲಯದಲ್ಲಿ ದಾಂಧಲೆ ನಡೆಸಿರುವುದೂ ಅಲ್ಲದೇ, ಅಲ್ಲಿಯೇ ಮಾಂಸಾಹಾರ ಸೇವನೆ ಮಾಡಿ ಮೂಳೆಗಳನ್ನು ಸ್ಥಳದಲ್ಲೇ ಎಸೆದು ದೇವಾಲಯದ ಪಾವಿತ್ರ್ಯತೆಗೆ ಅಪಚಾರವೆಸಗಿದ್ದಾನೆ.
ಆ.10ರಂದು ಬೆಳಿಗ್ಗೆ ದೇವಾಲಯಕ್ಕೆ ಪೂಜೆ ಸಲ್ಲಿಸಲು ಬಂದ ಅರ್ಚಕರ ಮೇಲೂ ಸಹ ರೆಹಮತ್ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಸ್ಥಳೀಯರ ಕೈಗೆ ಸಿಕ್ಕಿಬಿದಿದ್ದ ಪರಿಣಾಮ ಥಳಿತಕ್ಕೊಳಗಾಗಿದ್ದಾನೆ. ದೇವಾಲಯದ ಮೇಲೆ ದಾಳಿ ನಡೆಸಿದ ಯುವಕನನ್ನು ಪೊಲೀಸ್ ಠಾಣೆಗೆ ಒಪ್ಪಿಸಲಾಗಿದ್ದು, ಹಿಂದೂ ಪರ ಸಂಘಟನೆಗಳು ಈ ಕೃತ್ಯವನ್ನು ಖಂಡಿಸಿ ದೇವಾಲಯದ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಎಸ್.ಪಿ ಅನುಪಮ್ ಅಗರ್ ವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಖಂಡಿಸಿ ಆ.11ರಂದು ರಾಮನಗರ-ಕನಕಪುರ ಬಂದ್ ಕರೆ ನೀಡಲಾಗಿದೆ ಎಂದು ಹಿಂದೂ ಪರ ಸಂಘಟನೆ ಮುಖ್ಯಸ್ಥರು ತಿಳಿಸಿದ್ದಾರೆ.