Untitled Document
Sign Up | Login    
Dynamic website and Portals
  
August 10, 2014

ರಾಮನಗರದ ದೇವಾಲಯದ ಮೇಲೆ ಅನ್ಯ ಕೋಮಿನ ಯುವಕನಿಂದ ದಾಳಿ, ಪರಿಸ್ಥಿತಿ ಉದ್ವಿಘ್ನ

ರಾಮನಗರ : 'ರಾಮನಗರ'ದ ಅರ್ಕೇಶ್ವರ ದೇವಾಲಯಕ್ಕೆ ಅನ್ಯ ಕೋಮಿನ ಯುವಕನೊಬ್ಬ ನುಗ್ಗಿ ದಾಂಧಲೆ ಮಾಡಿದ ಘಟನೆ ಆ.10ರಂದು ಬೆಳಕಿಗೆ ಬಂದಿದೆ.

ರಾಮನಗರದ ರೆಹಮತ್ ಎಂಬ ಯುವಕ ಆ.9ರಂದು ರಾತ್ರಿ ದೇವಾಲಯದ ಬೀಗ ಮುರಿದು ಒಳಕ್ಕೆ ನುಗ್ಗಿ ದೇವಾಲಯ ಗೋಪುರ ಹಾಗೂ ಕಳಶ, ಗಂಟೆಗಳನ್ನು ಹಾಳುಗೆಡವಿದ್ದಾನೆ. ದೇವಾಲಯದಲ್ಲಿ ದಾಂಧಲೆ ನಡೆಸಿರುವುದೂ ಅಲ್ಲದೇ, ಅಲ್ಲಿಯೇ ಮಾಂಸಾಹಾರ ಸೇವನೆ ಮಾಡಿ ಮೂಳೆಗಳನ್ನು ಸ್ಥಳದಲ್ಲೇ ಎಸೆದು ದೇವಾಲಯದ ಪಾವಿತ್ರ್ಯತೆಗೆ ಅಪಚಾರವೆಸಗಿದ್ದಾನೆ.

ಆ.10ರಂದು ಬೆಳಿಗ್ಗೆ ದೇವಾಲಯಕ್ಕೆ ಪೂಜೆ ಸಲ್ಲಿಸಲು ಬಂದ ಅರ್ಚಕರ ಮೇಲೂ ಸಹ ರೆಹಮತ್ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಸ್ಥಳೀಯರ ಕೈಗೆ ಸಿಕ್ಕಿಬಿದಿದ್ದ ಪರಿಣಾಮ ಥಳಿತಕ್ಕೊಳಗಾಗಿದ್ದಾನೆ. ದೇವಾಲಯದ ಮೇಲೆ ದಾಳಿ ನಡೆಸಿದ ಯುವಕನನ್ನು ಪೊಲೀಸ್ ಠಾಣೆಗೆ ಒಪ್ಪಿಸಲಾಗಿದ್ದು, ಹಿಂದೂ ಪರ ಸಂಘಟನೆಗಳು ಈ ಕೃತ್ಯವನ್ನು ಖಂಡಿಸಿ ದೇವಾಲಯದ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಎಸ್.​ಪಿ ಅನುಪಮ್​ ಅಗರ್​ ವಾಲ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ಖಂಡಿಸಿ ಆ.11ರಂದು ರಾಮನಗರ-ಕನಕಪುರ ಬಂದ್ ಕರೆ ನೀಡಲಾಗಿದೆ ಎಂದು ಹಿಂದೂ ಪರ ಸಂಘಟನೆ ಮುಖ್ಯಸ್ಥರು ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited