ನವದೆಹಲಿ : ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗೇಟ್-3 ರಲ್ಲಿ ಪ್ರತಿಷ್ಠಾಪಿಸಿದ್ದ ಜಗತ್ತಿನ ಅತಿದೊಡ್ಡ ಚರಕವನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಉದ್ಘಾಟಿಸಿದರು.
ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ, ಚರಕ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಜನರಿಗೆ ಸ್ವಾವಲಂಬನೆ ದೊರಕಿಸಿದ ವಸ್ತುವಾಗಿದೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗೇಟ್ ನಂಬರ್ 4 ಮತ್ತು 5 ರ ಮಧ್ಯೆ ಭಾರತದ ಸಂಸ್ಕೃತಿ ಎತ್ತಿಹಿಡಿಯಲು ಸಾಧ್ಯ. ವಿವಿಧ ಇತರೆ ಕೆತ್ತನೆಗಳು ಚರಕಕ್ಕೆ ಪೂರಕವಾಗಿ ನಿರ್ಮಿಸಲಾಗಿದೆ ಎಂದರು.
ಚರಕ ಪ್ರತಿಷ್ಠಾಪಿಸಿರುವುದು ಭಾರತದ ಗತವೈಭವ ಸಾರಲು ಮತ್ತು ಸಾಮರಸ್ಯ ಮೌಲ್ಯಗಳನ್ನು ಬಿಂಬಿಸಲು, ಮಹಾತ್ಮ ಗಾಂಧಿಜಿಯವರ ಆದರ್ಶ ಸಮಾನತಾವಾದ ಸಾರುವುದು ನಮ್ಮ ಉದ್ದೇಶ ಎಂದು ಪ್ರಧಾನಿ ಮೋದಿ ಲಿಖಿತ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ದೆಹಲಿಯ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಕೂಡ ಭಾಗವಹಿಸಿದ್ದರು.
ಮುದ್ರೆಗಳು, ಆನೆ ಚಿತ್ರ, ಸೂರ್ಯನ ಪ್ರತಿಮೆ, ಚರಕದ ಜತೆ ನಿರ್ಮಾಣ ಮಾಡಲಾಗಿದೆ. 27 ಫೀಟ್ ಉದ್ಧ ,15 ಫೀಟ್ ಎತ್ತರವಿರುವ ಚರಕ ನಿರ್ಮಿಸಲು ಅಹಮದಾಬಾದಿನ 42 ಕಾರ್ವಿುಕರು 50 ದಿನ ಸತತ ಕೆಲಸ ಮಾಡಿದ್ದಾರೆ.