ಇಸ್ಲಾಮಾಬಾದ್ : ಭಾರತದೊಂದಿಗೆ ಸಂಬಂಧವನ್ನು ಸುಧಾರಿಸಿಕೊಳ್ಳಲು ನಾವು ಬಯಸುತ್ತಿದ್ದೇವೆ. ಆದರೆ ಭಾರತ ಕೇವಲ ಭಯೋತ್ಪಾದನೆ ಬಗ್ಗೆ ಮಾತ್ರ ಮಾತನಾಡಲು ಒಲವು ತೋರಿಸುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ.
ಪಾಕಿಸ್ತಾನದ ಪ್ರತಿನಿಧಿಯಾಗಿರುವ ಮಲೀಹಾ ಲೋಧಿ, ಭಾರತ ನೆರೆಯ ದೇಶದೊಂದಿಗಿನ ದ್ವಿಪಕ್ಷೀಯ ಸಂಬಂಧ ಸುಧಾರಿಸಿಕೊಳ್ಳಲು ಹೆಚ್ಚಿನ ಉತ್ಸಾಹ ತೋರುತ್ತಿಲ್ಲ ಎಂದು ವಿಶ್ವಸಂಸ್ಥೆಗೆ ದೂರಿದ್ದಾರೆ.
ಏಪ್ರಿಲ್ 26ರಂದು ನವದೆಹಲಿಯಲ್ಲಿ ಹಾರ್ಟ್ ಆಫ್ ಏಷ್ಯಾ ಪ್ರಾದೇಶಿಕ ಸಮ್ಮೇಳನದಲ್ಲಿ ಭಾರತ, ಪಾಕ್ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆ ನಡೆಯುವ ಒಂದು ದಿನದ ಮೊದಲು ಲೋಧಿ ಈ ಹೇಳಿಕೆ ಕೊಟ್ಟಿದ್ದರು.
ಶಾಂತಿ ಮಾತುಕತೆಯನ್ನು ಪುನರ್ ಆರಂಭಿಸುವಂತೆ ಪಾಕಿಸ್ತಾನ ಪದೇ, ಪದೇ ಭಾರತಕ್ಕೆ ಒತ್ತಾಯಿಸಿತ್ತು. ಬಳಿಕ ಭಾರತ ಅದಕ್ಕೆ ಸಹಮತ ಸೂಚಿಸಿತ್ತು. ಆದರೆ ಭಾರತ ಮಾತುಕತೆಯಲ್ಲಿ ಭಯೋತ್ಪಾದನೆ ಕುರಿತು ಚರ್ಚಿಸುವ ಸೂಚನೆ ನೀಡಿದೆ ಎಂದು ಆರೋಪಿಸಿದ್ದಾರೆ.