Untitled Document
Sign Up | Login    
Dynamic website and Portals
  
March 30, 2016

ರಾಜ್ಯದ ಜನತೆಗೆ ಕರೆಂಟ್ ಶಾಕ್: ವಿದ್ಯುತ್ ದರ 48 ಪೈಸೆ ಹೆಚ್ಚಳ

ಬೆಂಗಳೂರು : ರಾಜ್ಯದಲ್ಲಿ ಬರಗಾಲ, ಕುಡಿಯುವ ನೀರಿನ ಸಮಸ್ಯೆಗಳ ನಡುವೆಯೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆ.ಇ.ಆರ್.ಸಿ) ಪ್ರತಿ ಯೂನಿಟ್ ಗೆ 48 ಪೈಸೆ ವಿದ್ಯುತ್ ದರ ಏರಿಕೆ ಮಾಡಿದೆ. ನೂತನ ದರ ಏಪ್ರಿಲ್ ಒಂದರಿಂದಲೇ ಜಾರಿಗೆ ಬರಲಿದೆ.

ಕೆ.ಇ.ಆರ್.ಸಿ ಅಧ್ಯಕ್ಷ ಎಂ.ಕೆ ಶಂಕರಲಿಂಗೇಗೌಡ ಸುದ್ದಿಗೋಷ್ಠಿಯಲ್ಲಿ ಪರಿಷ್ಕೃತ ದರವನ್ನು ಪ್ರಕಟಿಸಿದ್ದಾರೆ. ಪ್ರತಿ ಯೂನಿಟ್ ವಿದ್ಯುತ್ ಗೆ 48 ಪೈಸೆ ಏರಿಸುವ ಮೂಲಕ ರಾಜ್ಯದ ಜನತೆಗೆ ಕರೆಂಟ್ ಶಾಕ್ ನೀಡಿದೆ. ಪರಿಷ್ಕರಣೆ ಪ್ರಮಾಣ ಸರಾಸರಿ 48 ಪೈಸೆ ಗಡಿ ದಾಟಿದ್ದು ಇದು ಕಳೆದ ಐದು ವರ್ಷಗಳಲ್ಲಿನ ಅತ್ಯಧಿಕ ವಿದ್ಯುತ್ ದರ ಏರಿಕೆಯಾಗಿದೆ.

ಗ್ರಾಮೀಣ ಪ್ರದೇಶ ಗೃಹಬಳಕೆ ಗ್ರಾಹಕರಿಗೆ ಮೊದಲ 30 ಯೂನಿಟ್‍ಗೆ 2.60 ಪೈಸೆಯಿಂದ 2.90 ಪೈಸೆಗೆ ಹೆಚ್ಚಳ ಮಾದಲಾಗಿದೆ. 31 ರಿಂದ 100 ಯೂನಿಟ್‍ವರೆಗೆ 3.70 ಪೈಸೆ ಯಿಂದ 4.10 ಪೈಸೆಗೆ ಹೆಚ್ಚಳ ಮಾಡಲಾಗಿದ್ದು,101ರಿಂದ 200 ಯೂನಿಟ್‍ವರೆಗೆ 5.10 ಪೈಸೆಯಿಂದ 5.60 ಪೈಸೆಗೆ ಹೆಚ್ಚಳ ಹಾಗೂ 200 ಯೂನಿಟ್ ಮೇಲ್ಪಟ್ಟು 5.90 ಪೈಸೆಯಿಂದ 6.40 ಪೈಸೆಗೆ ಏರಿಕೆ ಮಾದಲಾಗಿದೆ.

ನಗರ ಪ್ರದೇಶದ ಗೃಹಬಳಕೆ ಗ್ರಾಹಕರಿಗೆ 30 ಯೂನಿಟ್‍ವರೆಗೆ 2.70 ಪೈಸೆಯಿಂದ 3 ರೂಗೆ ಏರಿಕೆ ಮಾಡಲಾಗಿದೆ. 31 ರಿಂದ 100 ಯೂನಿಟ್‍ವರೆಗೆ 4 ರೂ ನಿಂದ 4.40 ಪೈಸೆ ಗೆ ಹೆಚ್ಚಳ,101ರಿಂದ 200 ಯೂನಿಟ್‍ವರೆಗೆ 5.40 ಪೈಸೆಯಿಂದ 5.90 ಪೈಸೆಗೆ ಹೆಚ್ಚಳ ಹಾಗೂ 200 ಯೂನಿಟ್ ಮೇಲ್ಪಟ್ಟು 6.40 ಪೈಸೆಯಿಂದ 6.90 ಪೈಸೆಗೆ ಏರಿಕೆ ಮಾಡಲಾಗಿದೆ.

ಬೆಸ್ಕಾಂ ವ್ಯಾಪ್ತಿಯ ಎಲ್‍ಟಿ ಕೈಗಾರಿಕೆಗೆ ಸರಾಸರಿ 15ರಿಂದ 30 ಪೈಸೆ ಹೆಚ್ಚಳ ಮಾಡಲಾಗಿದೆ.ಮೊದಲ 500 ಯೂನಿಟ್ ವರೆಗೆ 4.90 ಪೈಸೆ ಇತ್ತು, 5 ರೂ 10 ಪೈಸೆ ಹಾಗೂ 500 ಯೂನಿಟ್‍ ಗಿಂತ ಹೆಚ್ಚಿನ ಬಳಕೆಗೆ 6 ರೂ.ಯಿಂದ 6.30 ಪೈಸೆ ಹೆಚ್ಚಳಮಾಡಲಾಗಿದೆ.

ಎಲ್‍ಟಿ ವಾಣಿಜ್ಯ ಬಳಕೆದಾರರಿಗೆ ಪ್ರತಿ ಯೂನಿಟ್‍ಗೆ 20 ಪೈಸೆ ಹೆಚ್ಚಳ, ಮೊದಲ 50 ಯೂನಿಟ್‍ ಗೆ 6.95 ಪೈಸೆಯಿಂದ 7.15 ಪೈಸೆಗೆ ಹೆಚ್ಚಳ, 50 ಯೂನಿಟ್ ನಂತರದ ಬಳಕೆಗೆ 7.95 ಪೈಸೆಯಿಂದ 8.15 ಪೈಸೆಗೆ ಹೆಚ್ಚಳ ಮಾದಲಾಗಿದೆ.

ಗ್ರಾಮಾಂತರ ಪ್ರದೇಶದ ವಾಣಿಜ್ಯ ಬಳಕೆಗೆ ಮೊದಲ 50 ಯೂನಿಟ್‍ಗೆ 6.45 ಪೈಸೆಯಿಂದ 6.65 ಪೈಸೆಗೆ ಹೆಚ್ಚಳ ಹಾಗೂ 50 ಯೂನಿಟ್ ನಂತರದ ಬಳಕೆಗೆ 7.45 ಪೈಸೆಯಿಂದ 7.65 ಪೈಸೆಗೆ ಹೆಚ್ಚಳ

ಕುಡಿಯುವ ನೀರು ಸರಬರಾಜು, ಬೀದಿ ದೀಪ ಬಳಕೆಯ ವಿದ್ಯುತ್‍ ಗೂ ದರ ಏರಿಕೆ ಬಿಸಿತಟ್ಟಿದ್ದು, ಪ್ರತಿ ಯೂನಿಟ್‍ಗೆ 50 ಪೈಸೆ ಹೆಚ್ಚಳ ಮಾಡಲಾಗಿದೆ. ಎಲ್‍ಇಡಿ ಬಳಕೆಗೆ ದರ ಏರಿಕೆ ಇರುವುದಿಲ್ಲ. ಮಿತ ಇತರೆ ಬೀದಿ ದೀಪಗಳಿಗೆ 50 ಪೈಸೆ ಹೆಚ್ಚಳ ಮಾಡಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited