Untitled Document
Sign Up | Login    
Dynamic website and Portals
  
May 19, 2015

ಲಘು ಹೆಲಿಕಾಪ್ಟರ್ ಮತ್ತು ರಿಮೋಟ್‌ ಚಾಲಿತ ಸ್ಫೋಟಕಗಳ ಮೂಲಕ ದಾಳಿಗೆ ನಕ್ಸಲ್ ಸಂಚು

ಗಯಾ : ಇಷ್ಟು ದಿನ ಪೊಲೀಸರ ಮೇಲೆ ದಾಳಿ ನಡೆಸುವುದು, ಶಸ್ತ್ರಾಸ್ತ್ರಗಳನ್ನು ಕದ್ದೊಯ್ಯುವುದು ಮತ್ತು ಸೇನಾ ಕಾಪ್ಟರ್‌ ಗಳ ಮೇಲೆ ದಾಳಿ ನಡೆಸುವುದನ್ನು ಮಾಡುತ್ತಿದ್ದ ನಕ್ಸಲರು, ಇದೀಗ ಸ್ವತಃ ತಾವೇ ಲಘು ಹೆಲಿಕಾಪ್ಟರ್ ಮತ್ತು ರಿಮೋಟ್‌ ಚಾಲಿತ ಸ್ಫೋಟಕಗಳನ್ನು ತಯಾರಿಸಲು ಯೋಜನೆ ರೂಪಿಸಿರುವ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ಇದು ಬಿಹಾರ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ನಕ್ಸಲರ ಉಪಟಳವನ್ನು ಮಟ್ಟಹಾಕಲು ಹರಸಾಹಸ ಪಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಭಾರೀ ಆತಂಕ ತಂದಿದೆ.

ಕಳೆದ ವಾರವಷ್ಟೇ ಬಿಹಾರದ ಗಯಾ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ನಡೆಸಿದ ದಾಳಿಯಲ್ಲಿ ಮೂವರು ನಕ್ಸಲರನ್ನು ಬಂಧಿಸಲಾಗಿತ್ತು. ಬಂಧಿತ ನಕ್ಸಲರಿಂದ ಶಸ್ತ್ರಾಸ್ತ್ರಗಳ ಜೊತೆ ಸಾಕಷ್ಟು ಪ್ರಮಾಣದ ಲಿಖೀತ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ದಾಖಲೆಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ನಕ್ಸಲರು, ಮೋಟಾರ್‌ ಸೈಕಲ್‌ ಇಂಜಿನ್‌ ಮತ್ತು ಅತ್ಯಾಧುನಿಕ ಸಲಕರಣೆಗಳನ್ನು ಬಳಸಿ ಲಘು ಹೆಲಿಕಾಪ್ಟರ್‌ ಗಳನ್ನು ತಯಾರಿಸಲು ಯತ್ನಿಸಿರುವುದು ತಿಳಿದು ಬಂದಿದೆ.

ದಟ್ಟ ಮತ್ತು ಕಡಿದಾದ ಅರಣ್ಯ ಪ್ರದೇಶದಲ್ಲಿ ತೀರಾ ಸಣ್ಣ ಅವಧಿಯ ಪ್ರಯಾಣಕ್ಕೆ ಅನುವಾಗುವಂತಹ ಹೆಲಿಕಾಪ್ಟರ್‌ ಸಿದ್ಧಪಡಿಸುವುದು ನಕ್ಸಲರ ಯೋಜನೆಯಾಗಿತ್ತು ಎಂದು ಮೂಲಗಳು ತಿಳಿಸಿವೆ.

ನಕ್ಸಲರ ಬಳಿ ಲಭ್ಯವಾದ ಲಿಖೀತ ದಾಖಲೆಗಳು ಅವರ ಮುಂದಿನ ಕಾರ್ಯತಂತ್ರಗಳ ಮೇಲೆ ಬೆಳಕು ಚೆಲ್ಲಿವೆ. ಅದರನ್ವಯ, ತಾವು ಕಾರ್ಯನಿರ್ವಹಿಸುತ್ತಿರುವ ಒಂದು ಅರಣ್ಯದಿಂದ, ಸಮೀಪದ ಇನ್ನೊಂದು ಅರಣ್ಯ ಪ್ರದೇಶಕ್ಕೆ ತೆರಳಲು ಹೆಲಿಕಾಪ್ಟರ್‌ ತಯಾರಿಸಲು ನಕ್ಸಲರು ಯೋಜನೆ ರೂಪಿಸಿದ್ದಾರೆ. ಇಬ್ಬರು ಮಾತ್ರವೇ ಕೂರಬಹುದಾದ ಇಂಥ ಮಿನಿ ಕಾಪ್ಟರ್‌ ಗಳು, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆತ್ವರಿತವಾಗಿ ತೆರಳಲು ಅನುಕೂಲ ವಾಗುತ್ತದೆ ಎಂಬುದು ನಕ್ಸಲರ ನಂಬುಗೆ. ಹೀಗಾಗಿ ಹೀರೋ ಹೊಂಡಾ ಮೋಟಾರ್‌ ಬೈಕ್‌ ನ ಇಂಜಿನ್‌ ಅನ್ನು ಬಳಸಿ ಕಾಪ್ಟರ್‌ ನಿರ್ಮಿಸಲು ಅವರು ಯೋಜಿಸಿದ್ದರು. ಆದರೆ ಇಂಥ ಕಾಪ್ಟರ್‌ ನಿರ್ಮಾಣಕ್ಕೆ ಸ್ಕೆಚ್‌ ತಯಾರಿಸಲಾಗಿತ್ತೇ ಇಲ್ಲವೇ ಎಂಬುದರ ಬಗ್ಗೆ ಸಿಆರ್‌ಪಿಎಫ್ ಸಿಬ್ಬಂದಿ ಮಾಹಿತಿ ನೀಡಿಲ್ಲ.

ಇನ್ನು ಕಾಪ್ಟರ್‌ಗಳ ಜೊತೆಗೆ ಮೋಟಾರ್‌ ಶೆಲ್‌ಗ‌ಳು ಮತ್ತು ರಿಮೋಟ್‌ ಚಾಲಿತ ಸ್ಫೋಟಕಗಳನ್ನು ತಯಾರಿಸಲು ಯತ್ನ ನಡೆಸಿರುವುದು ಕೂಡ ಕಂಡು ಬಂದಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited