ಲಖ್ನೋ : ಪುಣ್ಯ ನದಿಗಳಲ್ಲೊಂದಾಗಿರುವ ಗಂಗಾ ನದಿಯಲ್ಲಿ 100ಕ್ಕೂ ಹೆಚ್ಚು ಮಾನವ ಶವಗಳು ಪತ್ತೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಕಾನ್ಪೂರ ಯುನಾವೋ ಸಮೀಪದ ಪರಿಯಾರ್ ಘಾಟ್ ಗಂಗಾ ನದಿಯಲ್ಲಿ 108ಕ್ಕೂ ಅಧಿಕ ಶವಗಳು ಪತ್ತೆಯಾಗಿದ್ದು, ಸ್ಥಳೀಯರು ಈ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸಿದ್ದಾರೆ. ಈ ಮಾನವ ಶವಗಳು ಸುಮಾರು 5 ತಿಂಗಳ ಹಿಂದೆ ಇಲ್ಲಿ ತಂದು ಹೂತಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಯುನಾವೋ ಅಧಿಕಾರಿಯಾದ ಪ್ರಸಾದ್ ಶುಕ್ಲಾ, ಹಿಂದೂಗಳು ನೂರಾರು ಸಂಖ್ಯೆಯಲ್ಲಿ ಶವಗಳನ್ನು ಗಂಗಾನದಿಯಲ್ಲಿ ಅಂತ್ಯಕ್ರಿಯೆ ಮಾಡುತ್ತಿದ್ದು, ಇದೀಗ ನದಿಯಲ್ಲಿ ನೀರು ಬತ್ತಿಹೋಗಿದೆ. ಆದ್ದರಿಂದ ತಳದಲ್ಲಿರುವ ಶವಗಳು ಮೇಲೆ ತೇಲಿಬಂದಿವೆ. ಆದ್ದರಿಂದ ಸ್ಥಳೀಯರು ಆತಂಕ ಪಡುವ ಅಗತ್ಯವಿಲ್ಲ. ಈ ವಿಚಾರ ಕುರಿತು ತನಿಖೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.