ಹೈಟೆಕ್ ಉದ್ಯಾನವನ ಉದ್ಘಾಟನೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಪರೇಟರ್ ಹಾಗೂ ಕಾಂಗ್ರೆಸ್ ಶಾಸಕರ ಬೆಂಬಲಿಗರ ನಡುವೆ ವಾಗ್ವಾದಕ್ಕೆ ಕಾರಣವಾಗಿ ಪಾರ್ಕ್ ಸುತ್ತ ನಿಷೇಧಾಜ್ನೆ ಜಾರಿಗೊಳಿಸಿರುವ ಘಟನೆ ಬೆಂಗಳೂರಿನ ನಾಗರಬಾವಿಯಲ್ಲಿ ನಡೆದಿದೆ. ನಾಗರಬಾವಿಯಲ್ಲಿನ ಚಂದ್ರಗಿರಿ ಪಾರ್ಕ್ ಉದ್ಘಾಟನಾ ಸಮಾರಂಭವನ್ನು ಆ.31ರಂದು ಕಾರ್ಪರೇಟರ್ ಉಮೇಶ್...