Untitled Document
Sign Up | Login    
Dynamic website and Portals
  
September 2, 2016

ಕೆಎಸ್‍ಆರ್ ಟಿಸಿ ಗೆ ಹಲವು ಪ್ರಶಸ್ತಿಗಳ ಗರಿ

ಬೆಂಗಳೂರು : ಕೆಎಸ್‍ಆರ್ ಟಿಸಿಯ 'ಇದು ನನ್ನ ಬಸ್ಸು' ಸಾರ್ವಜನಿಕ ಜಾಗೃತಿ ಅಭಿಯಾನಕ್ಕೆ 2016 ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ, ಸಂಸ್ಥೆಯ ಸ್ಟಾಫ್ ಡ್ಯೂಟಿ ರೋಟ್ ಹಾಗೂ ರಜೆ ನಿರ್ವಹಣಾ ವ್ಯವಸ್ಥೆಗೆ ಏಷ್ಯಾ ಪೆಸಿಫಿಕ್ ಹೆಚ್ ಆರ್ ಪ್ರಶಸ್ತಿ ಮತ್ತು ಗ್ರೀನ್ ಟೆಕ್ ಸೇಫ್ಟಿ ಅವಾರ್ಡ್ -2016 ಪ್ರಶಸಿಗಳು ದೊರೆತಿವೆ.

ವಿಶ್ವ ಸಾಮಾಜಿಕ ಹೊಣೆಗಾರಿಕೆ ಸಂಸ್ಥೆ ಬೆಂಗಳೂರಿನ ಹೋಟೆಲ್ ತಾಜ್ ವಿವಾಂತದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೈಗೊಂಡಿರುವ ಹಲವು ಹೊಸ ಯೋಜನೆಗಳಿಗೆ ಪ್ರಶಸ್ತಿಗಳ ಸುರಿಮಳೆಯಾಗಿದೆ. “ಇದು ನನ್ನ ಬಸ್ಸು”-“It’s My Bus” ಸಾರ್ವಜನಿಕ ಜಾಗೃತಿ ಅಭಿಯಾನವು ದೇಶದ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಪ್ರಯೋಗವಾಗಿತ್ತು.

ಸಾರ್ವಜನಿಕ ಜಾಗೃತಿ ಅಭಿಯಾನ: ಕರ್ನಾಟಕದಲ್ಲಿ ಮಾತ್ರವಲ್ಲ ದೇಶದ ಯಾವುದೇ ಭಾಗದಲ್ಲಿ ಯಾವುದೇ ರೀತಿಯ ಬಂದ್, ಮುಷ್ಕರ ನಡೆದ ಸಂದರ್ಭಗಳಲ್ಲಿ ಸಾರಿಗೆ ಸಂಸ್ಥೆಯ ಬಸ್ಸುಗಳು ಮೊದಲ ಗುರಿಯಾಗುತ್ತಿದ್ದು, ಬಸ್ಸುಗಳು ಸಾರ್ವಜನಿಕ ಆಸ್ತಿ. ಬಸ್ಸುಗಳಿಗೆ ಹಾನಿ ಮಾಡಿದರೆ ಅದು ತಮ್ಮದೇ ನಷ್ಟವೆಂಬ ಭಾವನೆ ಸಾರ್ವಜನಿಕರಲ್ಲಿ ಮೂಡಬೇಕು ಎಂಬ ಸದುದ್ದೇಶದಿಂದ ಈ ಅಭಿಯಾನವನ್ನು ಕೈಕೊಳ್ಳಲಾಗಿತ್ತು. ಸಂಸ್ಥೆಯ ಈ ಅಭಿಯಾನವನ್ನು ದೇಶದ ಇತರೆ ರಸ್ತೆ ಸಾರಿಗೆ ಸಂಸ್ಥೆಗಳು ಅನುಷ್ಟಾನಗೊಳಿಸಲು ಆಶಯ ವ್ಯಕ್ತಪಡಿಸಿದ್ದು, ಈಗಾಗಲೇ ಗುಜರಾತ್ ಮತ್ತು ರಾಜಸ್ಥಾನ ರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ ಹಲವು ರಸ್ತೆ ಸಾರಿಗೆ ಸಂಸ್ಥೆಗಳು ಈ ಮಾದರಿಯ ಅಭಿಯಾನವನ್ನು ರೂಪಿಸಿದ್ದಾರೆ.

ಸಿಬ್ಬಂದಿಗಳ ಡ್ಯೂಟಿ ರೋಟಾ ಮತ್ತು ರಜೆ ಕಿಯೋಸ್ಕ್ ವ್ಯವಸ್ಥೆ ರಾಜ್ಯ ರಸ್ತೆ ಸಾರಿಗೆ ಇತಿಹಾಸದಲ್ಲಿಯೇ ಪ್ರಪ್ರಥಮ ಪ್ರಯತ್ನವಾಗಿದೆ. ಟಚ್ ಸ್ಕ್ರೀನ್ ಹೊಂದಿರುವ, 24×7 ಸಿಬ್ಬಂದಿ ಸ್ನೇಹಿ ಕಿಯೋಸ್ಕ್, ಸೇವಾ ಜೇಷ್ಠತೆ ಮತ್ತು ಕೌನ್ಸಿಲಿಂಗ್ ಮೂಲಕ ಸ್ವಯಂ ಡ್ಯೂಟಿ ಹೊಂದಿಸಿಕೊಡುವ, ಪಾರದರ್ಶಕ, ಭ್ರಷ್ಠತೆಗೆ ಅವಕಾಶವಿಲ್ಲದಂತಹ, ನಿಗದಿತ ಸಮಯದಲ್ಲಿ ರಜೆ ಮಂಜೂರಾತಿ, ಎಸ್‍ಎಂಎಸ್ ಮಾಹಿತಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

 

 

Related News

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited