ಬೆಂಗಳೂರು : ವಿಶ್ವವಿಖ್ಯಾತ ಮಸೂರು ದಸರಾ ಮಹೋತ್ಸವಕ್ಕೆ ಈ ವರ್ಷದ ಅಕ್ಟೋಬರ್ 1ರಂದು ಚಾಮುಂಡಿ ಬೆಟ್ಟದಲ್ಲಿ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ದಸರಾ ಸಿದ್ಧತೆ ಕುರಿತು ನಡೆದ ಉನ್ನತ ಮಟ್ಟದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಂಪ್ರದಾಯಿಕವಾಗಿ ಜನರನ್ನು ಆಕರ್ಷಿಸುವಂತೆ ನಡೆಸಲಾಗುವುದು ಎಂದರು.
ಈ ಬಾರಿ ವಿಜಯದಶಮಿ 11ನೇ ದಿನ ಬಂದಿದ್ದು, ಜಂಬೂ ಸವಾರಿ,ಟಾರ್ಚ್ ಲೈಟ್ ಪರೇಡ್ ಅಕ್ಟೋಬರ್ 11ರಂದು ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ
ದಸರಾ ಉದ್ಘಾಟನೆಗಾಗಿ ಹಿರಿಯ ಸಾಹಿತಿಗಳಾದ ಚನ್ನವೀರ ಕಣವಿ, ನಿಸಾರ್ ಅಹಮದ್, ಎಸ್ ಎಲ್ ಭೈರಪ್ಪ, ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರ ಹೆಸರು ಸಭೆಯಲ್ಲಿ ಪ್ರಸ್ತಾಪವಾಗಿದೆ. ಆದರೆ ಬಗ್ಗೆ ಅಂತಿಮ ತೀರ್ಮಾನವನ್ನು ಆಗಸ್ಟ್ 9 ರಂದು ನಡೆಯಲಿರುವ ದಸರಾ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.