ನವದೆಹಲಿ : ಸ್ವಾತಂತ್ರ ಹೋರಾಟಗಾರರಾದ ಚಂದ್ರಶೇಖರ ಆಜಾದ್ ಮತ್ತು ಬಾಲಗಂಗಾಧರ ತಿಲಕ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರಿಗೆ ಪ್ರಧಾನಿ ನರೇಂದ್ರಮೋದಿ ನಮನ ಸಲ್ಲಿಸಿದ್ದಾರೆ.
ಈ ಕುರಿತು ಟ್ವಿಟರ್ ನಲ್ಲಿ ಬರೆದಿರುವ ಪ್ರಧಾನಿ, 1906ರ ಜುಲೈ 23 ಬಾವ್ರಾ ಗ್ರಾಮದಲ್ಲಿ ಜನಿಸಿದ್ದ ಚಂದ್ರಶೇಕರ ಆಜಾದ್ ಅವರು ದೇಶಕ್ಕಾಗಿ ಹೋರಾಡಿ ತಮ್ಮ ಶೌರ್ಯ ತೋರಿಸುವ ಮೂಲಕ ಅಸಂಖ್ಯಾತ ಭಾರತೀಯರ ಮನಗೆದ್ದಿದ್ದು ಅವರಿಗೆ ನಾನು ನಮನ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಇನ್ನೊಂದು ಟ್ವೀಟ್ ನಲ್ಲಿ ಲೋಕಮಾನ್ಯ ತಿಲಕ್ ಎಂದೇ ಖ್ಯಾತರಾಗಿದ್ದ ಬಾಲಗಂಗಾಧರ್ ತಿಲಕ್ ಭಾರತದ ಇತಿಹಾಸ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹಲವಾರು ಭಾರತೀಯರಿಗೆ ತಮ್ಮ ದೇಶಕ್ಕಾಗಿ ಹೋರಾಡಲು ಸ್ಪೂರ್ತಿಯಾಗಿದ್ದರು ಎಂದು ತಿಳಿಸಿದ್ದಾರೆ.