Untitled Document
Sign Up | Login    
Dynamic website and Portals
  
July 21, 2016

ಭಗವಂತನ ಮುಂದೆ ಬಾಗಿದವನು ಭಗವಂತನೇ ಆಗುವನು :ರಾಘವೇಶ್ವರ ಶ್ರೀ

ಭಗವಂತನ ಮುಂದೆ ಬಾಗಿದವನು ಭಗವಂತನೇ ಆಗುವನು :ರಾಘವೇಶ್ವರ ಶ್ರೀ

ಬೆಂಗಳೂರು : ಭಗವಂತನ ಮುಂದೆ ಬಾಗಿದವನು ಭಗವಂತನೇ ಆಗುವನು. ಹನುಮಂತ ರಾಮ ಚರಣದೆಡೆಗೆ ಬಾಗಿ ರಾಮ ಸೇವಕ ರೂಪದಲ್ಲಿ ಸ್ವಾಮಿಯಾದನು ಎಂದು 'ಒಡಲು' ಸಭಾಂಗಣದ 'ಮಡಿಲು' ವೇದಿಕೆಯಲ್ಲಿ ಸಾನ್ನಿಧ್ಯವಹಿಸಿದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ತಮ್ಮ ಗೋಚಾತುರ್ಮಾಸ್ಯ ಸಂದೇಶದಲ್ಲಿ ಹೇಳಿದರು.

ಶ್ರೀ ರಾಮಚಂದ್ರಾಪುರ ಮಠದ ಬೆಂಗಳೂರಿನ ಶಾಖಾಮಠದಲ್ಲಿ ಗೋಕರ್ಣ ಉಪಾಧಿವಂತರುಗಳ ಸರ್ವಸೇವೆಯನ್ನು ಸ್ವೀಕರಿಸಿ ಮಾತನಾಡಿದ ಶ್ರೀಗಳು, ಗೋವುಗಳ ಬಣ್ಣ ಹಲವು ಆದರೆ ಹಾಲಿನ ಬಣ್ಣ ಸ್ವಚ್ಚ ಬಿಳಿ, ಹಾಗೆಯೇ ಸಂತ ಪರಂಪರೆ ಬೇರೆಬೇರೆಯಾದರೂ ಸಂತರು ನೀಡುವ ಉಪದೇಶ ಒಂದೇ. ಅದರಲ್ಲಿ ಭಿನ್ನತೆಯಿರದೇ ಜೀವಹಿತಕರವಾದ ಸಂದೇಶವಿರುತ್ತದೆ. ಗೋಮಾತೆಯ ಮೂಕಸೇವೆ ಮನುಕುಲಕ್ಕೆ ಜೀವಾಮೃತವಾಗಿದೆ. ಹಾಗೆಯೇ ಸದ್ದಿಲ್ಲದೆ ಗೋಸೇವಕರು ಮಾಡುವ ಸೇವೆಯನ್ನು ಸಮಾಜ ಗುರುತಿಸಬೇಕು. ಒಳಿತಿನ ಆಸೆ ಸಾಧನೆಗೆ ಪೂರಕವಾಗಿರುತ್ತದೆ. ಅಂತಹ ಆಸೆಯನ್ನು ಮಾಡಿ ಸಾಧಕರಾಗೋಣ ಎಂದು ಆಶೀರ್ವದಿಸಿದರು.

ಭಂಡಾರಕೇರಿಮಠದ ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರು ಸಂತಸಂದೇಶ ನೀಡಿ, ಗೋವು ಕೇವಲ ರಾಷ್ಟ್ರಪ್ರಾಣಿ ಅಲ್ಲ, ರಾಷ್ಟ್ರ ಮಾತೆಯಾಗಬೇಕು. ಗೋವು ಜಗತ್ತಿನ ಆಧಾರಸ್ತಂಭಗಳಲ್ಲೊಂದು. ಭಾರತೀಯ ಗೋವಂಶ ಬಹಳ ಪಾವಿತ್ರ್ಯತೆಯಿಂದ ಕೂಡಿದೆ ಎಂದರು.

ಪದ್ಮಪುರಾಣದ ಆಯ್ದ ಶ್ಲೋಕವನ್ನು ಸಭೆಗೆ ಉಪದೇಶಿಸಿದ ಭಂಡಾರಕೇರಿಶ್ರೀಗಳು ಗೋಸಂರಕ್ಷಣೆ ಅಭಯಪ್ರದ, ಗೋಮಾರಾಟ ಮಹಾಪಾಪ. ಪರಿಸರ ರಕ್ಷಣೆ, ರೋಗರುಜಿನಗಳನ್ನು ಕಡಿಮೆ ಮಾಡುವ ಗೋವುಗಳ ಮಧ್ಯೆ ಬದುಕುವುದರಿಂದ ಬದುಕು ಬಂಗಾರವಾಗುತ್ತದೆ. ಭಾರತದ ಎಲ್ಲಾ ತಳಿಗಳನ್ನು ಸಂರಕ್ಷಿಸುತ್ತಿರುವ ಶ್ರೀ ರಾಮಚಂದ್ರಾಪುರ ಮಠದ ಶ್ರೀಗಳು 'ಗೋಪಾಲೇಶ್ವರ'ರಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗೋಸೇವಕ ಪುರಸ್ಕಾರ ಸ್ವೀಕರಿಸಿದ ಡಾ. ಸುಬ್ಬಯ್ಯ, ಕೊಟ್ಟಿಗೆ ಗೊಬ್ಬರ ತಯಾರಿಕೆಯ ಬಗ್ಗೆ ಮಾಹಿತಿ ನೀಡಿದರು. ಇನ್ನೊರ್ವ ಗೋಸೇವಾ ಪುರಸ್ಕೃತ ಶ್ರೀಕಾಂತ ಬೆಟಗೇರಿ, ತಮ್ಮ ಟ್ರಸ್ಟ್ ಮೂಲಕ ಬುದ್ದಿಮಾಂದ್ಯ ಮಕ್ಕಳು ಗೋಶಾಲೆ ನಿರ್ವಹಿಸುತ್ತಿರುವ ಬಗ್ಗೆ ವಿವರಿಸಿದರು.

ಇದೇ ವೇಳೆ ಶ್ರೀಭಾರತೀಪ್ರಕಾಶನವು ಹೊರತಂದ ಕೃಷ್ಣಾನಂದ ಶರ್ಮಾ ಬರೆದ ಹನುಮದ್ವಿಕಾಸ ಎಂಬ ಪುಸ್ತಕ ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ಧ್ವನಿಮುದ್ರಿಕೆಯನ್ನು ರಾಘವೇಶ್ವರಶ್ರೀಗಳು ಲೋಕಾರ್ಪಣೆ ಮಾಡಿದರು.

ಸಮ್ಮುಖ ಸರ್ವಾಧಿಕಾರಿ ಟಿ. ಮಡಿಯಾಲ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ಜಿ. ಭಟ್, ಶ್ರೀಸಂಸ್ಥಾನದವರ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Religion & Spirituality

ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
  • ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
  • ಶಬರಿಮಲೈ ದೇಗುಲಕ್ಕೆ ಮಹಿಳೆಯ ಪ್ರವೇಶ ಕುರಿತಾದ ಆರ್ಜಿಯನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.
  • ವೈಭವದ ದಸರಾ ಮಹೋತ್ಸವ: ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿ
  • ನಂದಿಧ್ವಜಕ್ಕೆ ಸಿಎಂ ಪೂಜೆ: ಜಂಬೂಸವಾರಿಗೆ ಚಾಲನೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited