ನವದೆಹಲಿ : ಯುದ್ಧಗ್ರಸ್ಥ ದಕ್ಷಿಣ ಸೂಡಾನ್ನಲ್ಲಿ ಸಿಲುಕಿದ್ದ 156 ಭಾರತೀಯರನ್ನು ಕೇಂದ್ರ ಸರ್ಕಾರ ಸಂಕಟ್ ಮೋಚನ್ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ಭಾರತಕ್ಕೆ ಕರೆತಂದಿದೆ.
ಕೇಂದ್ರ ವಿದೇಶಾಂಗ ರಾಜ್ಯಖಾತೆ ಸಚಿವ ವಿ.ಕೆ ಸಿಂಗ್ ನೇತೃತ್ವದಲ್ಲಿ 2ಸಿ-17 ಗ್ಲೋಬ್ ಮಾಸ್ಟರ್ ಮಿಲಿಟರಿ ಎರಡು ವಿಮಾನಗಳ ಮೂಲಕ 156 ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ.
ಸುಡಾನ್ನಿಂದ ನೇರವಾಗಿ ರಾಷ್ಟ್ರರಾಜಧಾನಿ ದೆಹಲಿಗೆ ಮಿಲಿಟರಿ ವಿಮಾನಗಳು ಆಗಮಿಸಿದವು. ನಂತರ ಆಯಾ ರಾಜ್ಯದ ಜನೆತೆಗಾಗಿ ಪ್ರತ್ಯೇಕ ವಿಮಾನದ ವ್ಯವಸ್ಥೆಮಾಡಿ ಸುರಕ್ಷಿತವಾಗಿ ಮನೆತಲುಪಲು ರಕ್ಷಣಾ ಇಲಾಖೆ ವ್ಯವಸ್ಥೆ ಏರ್ಪಾಡುಮಾಡಿದೆ.
156 ಭಾರತೀಯರಲ್ಲಿ 46 ಕೇರಳಿಗರು, ನೇಪಾಳದ ಇಬ್ಬರು ಹಾಗೂ 7 ಮಹಿಳೆಯರು ಹಾಗೂ 3 ಮಕ್ಕಳು ಸೇರಿದ್ದು, ಇನ್ನುಳಿದಂತೆ ದಕ್ಷಿಣ ಭಾರತದ ಮೂಲದವರಾಗಿದ್ದಾರೆ.
ದಕ್ಷಿಣ ಸುಡಾನ್ನಲ್ಲಿ ಸುಮಾರು 500 ಭಾರತಿಯರಿದ್ದು, ಅವರನ್ನು ಹಂತ ಹಂತವಾಗಿ ಸುರಕ್ಷಿತವಾಗಿ ರಕ್ಷಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ದಕ್ಷಿಣ ಸುಡಾನ್ನಲ್ಲಿ ಆಂತರಿಕ ಗಲಭೆ ಉಂಟಾಗಿದ್ದು, ಈ ವರೆಗೆ 300ಕ್ಕೂ ಅಧಿಕ ಜನರು ಗಲಭೆಗೆ ಬಲಿಯಾಗಿದ್ದಾರೆ.