ಉಜ್ಜೈನ್ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದಕ್ಕೆ ವಿಶ್ವ ಹಿಂದು ಪರಿಷತ್, ಕೇಂದ್ರ ಸರ್ಕಾರಕ್ಕೆ ಅವಧಿ ನೀಡಿದ್ದು, ಡಿಸೆಂಬರ್ 31ರ ಗಡುವನ್ನು ವಿಧಿಸಿದೆ.
ಉಜ್ಜಯಿನಿಯ ಮಹಾಕಾಂಭಮೇಳದಲ್ಲಿ ನೆರೆದ ಸಂತರು ಹಾಗೂ ಯುವಕರನ್ನು ಉದ್ದೇಶಿಸಿ ಮಾತನಾಡಿದ ವಿಶ್ವ ಹಿಂದು ಪರಿಷತ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಇದೇ ವರ್ಷ ಡಿಸೆಂಬರ್ 31ರಂದು ಆರಂಭವಾಗಲಿದೆ. ಇದಕ್ಕಾಗಿ ನಾವು ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯುವುದಿಲ್ಲ ಎಂದು ಹೇಳಿದ್ದಾರೆ.
ಇಲ್ಲಿಯವರೆಗೆ ನಮ್ಮ ತಾಳ್ಮೆಯನ್ನು ಕಾಯ್ದುಕೊಂಡು ಬಂದಿದ್ದೇವೆ, ಆದರೆ ಡಿಸೆಂಬರ್ 31ರ ಆಬಳಿಕ ಕಾಯುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಶೇ.90ರಷ್ಟು ಕೆಲಸಗಳು ಈಗಾಗಲೇ ಮುಗಿದಿವೆ. ಬಾಕಿ ಉಳಿದಿರುವ ಶೇ.10ರಷ್ಟು ಕೆಲಸಗಳನ್ನು ಇನ್ನು ಸಾಧು-ಸಂತರನ್ನು ಬಳಸಿಕೊಂಡು ಮುಗಿಸಲಾಗುವುದು ಎಂದು ಹೇಳಿದ್ದಾರೆ.