Untitled Document
Sign Up | Login    
Dynamic website and Portals
  
April 24, 2016

ಮಕ್ಕಳ ಮನಸ್ಸು ಶುಭ್ರವಾದ ಬಿಳಿಹಾಳೆ ಇದ್ದಂತೆ: ವಸಂತ ವಾತ್ಸಲ್ಯ ಶಿಬಿರದಲ್ಲಿ ರಾಘವೇಶ್ವರ ಶ್ರೀ

ವಸಂತ ವಾತ್ಸಲ್ಯ - ಸಂಸ್ಕಾರದಾಯೀ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ವಸಂತ ವಾತ್ಸಲ್ಯ - ಸಂಸ್ಕಾರದಾಯೀ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ

ಬೆಂಗಳೂರು : ಮಕ್ಕಳಲ್ಲಿ ಕಲ್ಮಷ ಇರುವುದಿಲ್ಲ, ಮಕ್ಕಳ ಮನಸ್ಸು ಶುಭ್ರವಾದ ಬಿಳಿಹಾಳೆ ಇದ್ದಂತೆ, ಆ ನಿಷ್ಕಲ್ಮಷತೆಯೇ ದೇವರು. ಇಂದು ಪ್ರಪಂಚದಲ್ಲಿ ನಿಷ್ಕಲ್ಮಷತೆಯೊಂದನ್ನು ಹೊರತುಪಡಿಸಿ ಉಳಿದೆಲ್ಲವೂ ಸಿಗುತ್ತದೆ. ಸಂಸ್ಕಾರ ನೀಡುವ ಇಂತಹ ಶಿಬಿರಗಳ ಮೂಲಕ ನಿಷ್ಕಲ್ಮಷತೆಯನ್ನು ಉಳಿಸಿ ಬೆಳೆಸಬೇಕು ಎಂದು ಶ್ರೀ ರಾಮಚಂದ್ರಾಪುರಮಠಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಹೇಳಿದರು.

ಗಿರಿನಗರಶ್ರೀರಾಮಾಶ್ರಮದಲ್ಲಿ ನಡೆದ ವಸಂತ ವಾತ್ಸಲ್ಯ- ಸಂಸ್ಕಾರದಾಯೀ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ವಸಂತ ವಾತ್ಸಲ್ಯ ಶಬ್ದದಲ್ಲಿ ಸಂತ ಇದೆ. ಹಾಗೇ ವಸಂತ ವಾತ್ಸಲ್ಯ ಕಾರ್ಯಕ್ರಮದಲ್ಲಿ ಸಂತರಿದ್ದಾರೆ. ಇಂತಹ ಒಂದು ವಸಂತ ಕಾಲದಲ್ಲೇ ರಾಮನ ಅವತಾರದ ಮೂಲಕ ಜಗತ್ತಿಗೆ ಭಗವಂತನ ವಾತ್ಸಲ್ಯ ಸಿಕ್ಕಿತ್ತು. ಅಂತಹ ರಾಮನಿರುವ ರಾಮಚಂದ್ರಾಪುರ ಮಠದಲ್ಲಿ ನೀವೆಲ್ಲ ಇದ್ದೀರಿ. ಇಲ್ಲಿ ನಿಮಗೆ ರಾಮ, ಗುರು, ಗೋವು ಮತ್ತು ಮಕ್ಕಳು ಸಿಗುತ್ತಾರೆ. ರಾಮ, ಗುರು, ಗೋವು, ಮಕ್ಕಳು ಎಲ್ಲರೂ ದೇವರು. ಎಲ್ಲೂ ಕಲ್ಮಶವಿಲ್ಲ. ನಿಷ್ಕಲ್ಮಷತೆಯೇ ದೇವರು. ರಾಮ, ಗುರು, ಗೋವು ಮತ್ತು ಮಕ್ಕಳು ಈ ನಾಲ್ಕು ಬಗೆಯ ಸರ್ವಶ್ರೇಷ್ಠ ಸಹವಾಸದಲ್ಲಿ ಈ ಶಿಬಿರ ನಡೆಯಿತು. ಹೊಂದಾಣಿಕೆ, ಪ್ರೀತಿ-ವಿಶ್ವಾಸ, ಹಂಚಿ ತಿನ್ನುವ ಗುಣಗಳು ಇಂಥಾ ಶಿಬಿರಗಳಿಂದ ಬರುತ್ತದೆ. ಇದು ಜೀವನದ ಪಾಠವನ್ನು ಕಲಿಸುತ್ತದೆ. ಹೊಂದಾಣಿಕೆ ಹಾಗು ಪರಸ್ಪರ ಪ್ರೀತಿ ವಿಶ್ವಾಸಗಳ ಕೊರತೆಯಿಂದಾಗಿ ಇಂದು ಪ್ರಪಂಚದಲ್ಲಿ ಅನರ್ಥಗಳನ್ನು ನೋಡುತ್ತಿದ್ದೇವೆ. ಪ್ರೀತಿ, ಶಾಂತಿ, ಧರ್ಮ ಎಲ್ಲರಲ್ಲಿ ತುಂಬಲಿ, ಅವು ನಮ್ಮನ್ನಾಳುವಂತಾಗಲಿ ಎಂದು ಆಶಿಸಭರಒ.

ಎಲ್ಲರಲ್ಲಿ, ಎಲ್ಲ ಕಡೆ ಒಳಿತನ್ನು, ದೇವರನ್ನು ಕಾಣಿರಿ. ಆಗ ಮಾತ್ರ ದೇಶ ರಾಮರಾಜ್ಯವಾಗಲು ಸಾಧ್ಯ ಎಂಬ ಕಿವಿ ಮಾತನ್ನು ಹೇಳಿದ ಶ್ರೀಗಳು, ಶ್ರೀಮಠದ ಸಾಮಾಜಿಕ ಜಾಲತಾಣದಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಆಶೀರ್ವದಿಸಿದರು. ರಾಮರಕ್ಷಾ ಸ್ತೋತ್ರ ಸಮರ್ಪಣೆ ನೆರವೇರಿತು. ಶಿಬಿರದಲ್ಲಿ ನೂರಾರು ಮಕ್ಕಳು ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಂಡರು. ಮಧ್ಯಾಹ್ನ ಕುಮಾರಿ ಆದಿತಿ ಕೊಂಕೋಡಿ ಇವರಿಂದ ಕಲಾಮುಕುಲದ ಸಂಯೋಜನೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಸಂಪನ್ನವಾಯಿತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Religion & Spirituality

ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
  • ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
  • ಶಬರಿಮಲೈ ದೇಗುಲಕ್ಕೆ ಮಹಿಳೆಯ ಪ್ರವೇಶ ಕುರಿತಾದ ಆರ್ಜಿಯನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.
  • ವೈಭವದ ದಸರಾ ಮಹೋತ್ಸವ: ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿ
  • ನಂದಿಧ್ವಜಕ್ಕೆ ಸಿಎಂ ಪೂಜೆ: ಜಂಬೂಸವಾರಿಗೆ ಚಾಲನೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited