ನವದೆಹಲಿ : ದೇಶಾದ್ಯಂತ ಗೋಹತ್ಯೆಯನ್ನು ನಿಷೇಧಿಸಬೇಕು ಎಂದು ಯೋಗ ಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ. ಗೋಹತ್ಯೆ ನಿಷೇಧಿಸುವುದರಿಂದ, ಜನಾಂಗೀಯ ಘರ್ಷಣೆಗಳು ತಡೆಯಲು ಮತ್ತು ಕೋಮು ಸಾಮರಸ್ಯ ಬೆಳೆಸಲು ಸಹಾಯವಾಗುತ್ತದೆ ಎಂದು ಹೇಳಿದರು.
ಹದಿನೆಂಟನೇ ಶತಮಾನದ ವರೆಗೂ ಭಾರತದಲ್ಲಿ ಗೋಹತ್ಯೆ ಇರಲಿಲ್ಲ. ಮೊಘಲ್ ದೊರೆ ಔರಂಗಜೇಬ್ ಕೂಡ ಗೋ ಹತ್ಯೆಗೆ ಸಂಪೂರ್ಣ ನಿಷೇಧಿಸಿದ್ದ ಎಂದು ಬಾಬಾ ರಾಮ್ ದೇವ್ ಹೇಳಿದರು
ಅದರ ಜೊತೆಗೆ ಎಲ್ಲರೂ 'ಭಾರತ್ ಮಾತಾ ಕಿ ಜೈ' ಎಂದು ಹೇಳಲು ಕಾನೂನಿನಲ್ಲಿ ತಿದ್ದುಪಡಿ ಮಾಡಬೇಕೆಂದೂ ತಮ್ಮ ಸಲಹೆ ನೀಡಿದ್ದಾರೆ.
'ಭಾರತ್ ಮಾತಾ ಕಿ ಜೈ' ಎಂದು ಹೇಳುವುದಿಲ್ಲ ಎಂದು ಎಐಎಂಐಎಂ ನ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಮಾತನಾಡಿದ ರಾಮ್ ದೇವ್, ಕೇಂದ್ರ ಭಾರತ್ ಮಾತಾ ಕಿ ಜೈ ಹೇಳಲು ತಿದ್ದುಪಡಿ ತರಬೇಕು ಎಂದು ಹೇಳಿದರು.
ಸಂವಿಧಾನದಲ್ಲಿ ಎಲ್ಲೂ 'ಭಾರತ್ ಮಾತಾ ಕಿ ಜೈ' ಎಂದು ಹೇಳಬೇಕು ಎಂದು ಬರೆದಿಲ್ಲವಾದರೂ ಯಾರು ಹೇಳಿದರೂ ತಪ್ಪೇನಿಲ್ಲ. ಆದ್ದರಿಂದ ತಿದ್ದುಪಡಿ ಮಾಡಿ ಎಲ್ಲರೂ ಹೇಳುವಂತೆ ಮಾಡಬೇಕು ಎಂದು ಹೇಳಿದರು.