ಮುಂಬೈ : ಪಾಕ್ ಮೂಲದ ಉಗ್ರ ಸಂಘಟನೆ ಲಷ್ಕರ ಎ ತೊಯ್ಯಬಾ ಶಿವಸೇನೆಯ ಮುಖ್ಯಸ್ಥ ಬಾಳ ಠಾಕ್ರೆ ಅವರನ್ನು ಹತ್ಯೆಗೈಯುವ ಪ್ರಯತ್ನ ಮಾಡಿತ್ತು, ಆದರೆ ಆ ದುಷ್ಕರ್ಮಿಯನ್ನು ಬಂಧಿಸಲಾಯಿತು ಎಂದು ಉಗ್ರ ಡೇವಿಡ್ ಹೆಡ್ಲಿ ಗುರುವಾರ ತಿಳಿಸಿದ್ದಾನೆ.
ಠಾಕ್ರೆ ಹತ್ಯೆ ಯತ್ನದ ಬಗ್ಗೆ ನನಗೆ ನೇರ ಮಾಹಿತಿ ಇಲ್ಲವಾದರೂ ಅಂತಹ ಯತ್ನ ನಡೆದಿತ್ತು ಎಂದು ನನಗೆ ಗೊತ್ತಾಗಿತ್ತು. ಹಂತಕನನ್ನು ಬಂಧಿಸಿದರೂ ಅವನು ಪೊಲೀಸ್ ಕಸ್ಟಡಿಯಿಂದ ಪರಾರಿಯಾದ ಎಂದು ಹೆಡ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದಾನೆ.
ಎರಡು ಬಾರಿ ಮುಂಬಯಿಯ ಸೇನಾ ಭವನಕ್ಕೆ ಭೇಟಿ ನೀಡಿದ್ದೆ ಎಂದು ಹೆಡ್ಲಿ ಹೇಳಿದ್ದಾನೆ.
ತಾನು 2006 ರ ವರೆಗೆ ಲಷ್ಕರ ಎ ತೊಯ್ಯಬಾ ಉಗ್ರ ಸಂಘಟನೆಗೆ 60-70 ಲಕ್ಷ ಪಾಕೀಸ್ತಾನಿ ರೂಪಾಯಿಯನ್ನು ಕೊಟ್ಟಿರುವುದಾಗಿ ಉಗ್ರ ಡೆವಿಡ್ ಹೆಡ್ಲಿ ಬುಧವಾರ ತಿಳಿಸಿದ್ದ.
ಆದರೆ ಹೆಡ್ಲಿಯ ಹೆಂಡತಿ ಶಾಜಿಯಾ ಕುರಿತು ವಕೀಲರು ಕೇಳಿದ ಪ್ರಶ್ನೆಗೆ, ಹೆಡ್ಲಿ ಉತ್ತರಿಸಲು ನಿರಾಕರಿಸಿದ ಎನ್ನಲಾಗಿದೆ. ಶಾಜಿಯಾ ನನ್ನ ಹೆಂಡತಿ. ಆದರೆ ಈಗಲೇ ನಾನು ಅವಳಿರುವ ಸ್ಥಳ ಮತ್ತು ಅವಳ ಕುರಿತು ಯಾವುದೇ ಪ್ರಶ್ನೆಗೆ ಉತ್ತರಿಸುವುದಿಲ್ಲ ಎಂದು ಹೇಡ್ಲಿ ಹೇಳಿದ್ದಾನೆ.