ಬೆಂಗಳೂರು : ಸೋಮವಾರ, ಫೆ.29 ರಿಂದ ನಿತ್ಯ ಸೂರ್ಯೋದಯದೊಂದಿಗೆ 'ಸತ್ಯ ಸೂರ್ಯೋದಯ' ಕಾರ್ಯಕ್ರಮವನ್ನು ವೀಕ್ಷಿಸುತ್ತಾ ದಿನಾರಂಭಿಸುವ ಸುಯೋಗ ನಮ್ಮೆಲ್ಲರದ್ದಾಗಲಿದೆ.
ಶ್ರೀ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರಭಾರತೀ ಸ್ವಾಮೀಜಿಯವರ ಪ್ರವಚನಧಾರೆ ಹಾಗೂ ಸಂವಾದಗಳಿಂದ ಕೂಡಿದ ವಿಶಿಷ್ಟ ಪರಿಕಲ್ಪನೆಯ 'ಸತ್ಯ ಸೂರ್ಯೋದಯ' ಎಂಬ ಕಾರ್ಯಕ್ರಮ ಸರಣಿ ಪ್ರಜಾ ಟಿವಿಯಲ್ಲಿ ಶುಭಾರಂಭವಾಗಲಿದ್ದು, ಫೆಬ್ರವರಿ 29 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಬೆಳಗ್ಗೆ 6.30ಕ್ಕೆ ವಿಶಿಷ್ಟವಾದ ಈ ಕಾರ್ಯಕ್ರಮ ಮೂಡಿಬರಲಿದೆ.
ನಿತ್ಯದ ಜೀವನಕ್ಕೆ ಹತ್ತಿರವಾಗುವ ತತ್ತ್ವಗಳನ್ನೋಳಗೊಂಡ, ಆಪ್ಯಾಯಮಾನವಾದ ಪ್ರವಚನಮಾಲಿಕೆ ಹಾಗೂ ಸತ್ಯ ಸಂವಾದದಿಂದ ಕೂಡಿದ ಕಾರ್ಯಕ್ರಮ ಇದಾಗಲಿದ್ದು, ಶ್ರೀಗಳ ಎಂದಿನ ಅನುಪಮವಾದ ಶೈಲಿಯಲ್ಲಿ 'ಸತ್ಯ ಸೂರ್ಯೋದಯ'ಮೂಡಿಬರಲಿದೆ ಎಂದು ಶ್ರೀ ಮಠದ ಮಾಧ್ಯಮ ಪ್ರಕಟಣೆ ತಿಳಿಸಿದೆ.