ನವದೆಹಲಿ : ಉಗ್ರರ ವಿರೋಧಿ ಕಾರ್ಯಾಚರಣೆಯೇ ಮುಖ್ಯ ಉದ್ದೇಶವಾಗಿರುವ ಎನ್ ಎಸ್ ಜಿ ಕಮಾಂಡೋಗಳನ್ನು ಬೇರೆ ಬೇರೆ ಕಾರಣಗಳಿಂದಾಗಿ ಗಣ್ಯರ ಭದ್ರತೆಗೆ ನಿಯೋಜನೆಗೊಳಿಸಲಾಗಿತ್ತು. ಈಗ ಗಣ್ಯರ ರಕ್ಷಣೆಗೆ ನಿಯೋಜನೆಗೊಂಡ ಸುಮಾರು 600 ಕಮಾಂಡೋಗಳನ್ನು ಎನ್ ಎಸ್ ಜಿ ಹಿಂದಕ್ಕೆ ಕರೆಸಿಕೊಂಡು, ಇತ್ತೀಚೆಗೆ ನಡೆದ ಪಠಾಣ್ಕೋಟ್ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಅವರನ್ನು ಬಳಸಿಕೊಂಡಿದೆ.
ಕಳೆದ 2 ವರ್ಷಗಳಿಂದ ಎನ್ಎಸ್ಜಿ ಕಮಾಂಡೊಗಳನ್ನು ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಮಾತ್ರ ಬಳಸಿಕೊಳ್ಳುವ ಚಿಂತನೆ ನಡೆಯುತ್ತಿತ್ತು. ಅದರಂತೆ ಇದೀಗ 600ಕ್ಕೂ ಹೆಚ್ಚು ಕಮಾಂಡೋಗಳನ್ನು ಗಣ್ಯರ ಭದ್ರತೆಯಿಂದಕ್ಕೆ ಹಿಂದಕ್ಕೆ ಕರೆಸಿಕೊಳ್ಳಲಾಗಿದೆ.
ಹೊಸ ನೀಲ ನಕ್ಷೆ ಪ್ರಕಾರ, ವಿವಿಐಪಿಗಳ ಭದ್ರತೆಗೆ ನಿಯೋಜಿಸಿದ್ದ ಸ್ಪೆಷಲ್ ರೇಂಜರ್ ಗ್ರೂಪ್ನ (ಎಸ್ಆರ್ಜಿ) ಮೂರು ತಂಡಗಳ ಪೈಕಿ ಎರಡು ತಂಡಗಳನ್ನು ವಿವಿಐಪಿ ಭದ್ರತೆಯಿಂದ ವಾಪಸ್ ಕರೆಸಿಕೊಂಡು ವಿಶೇಷ ಕಾರ್ಯ ಪಡೆಯ ನೆರವಿನೊಂದಿಗೆ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.
ಪಠಾಣ್ ಕೋಟ್ ದಾಳಿಯ ಸಂದರ್ಭದಲ್ಲಿ, ಘಟಕ ಪೂರ್ಣ ಪ್ರಮಾಣದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ ಎಂದು ಅಧಿಕಾರಿ ಒಬ್ಬರು ತಿಳಿಸಿದ್ದಾರೆ. ಆಯ್ದ ಕಮಾಂಡೋಗಳನ್ನು ಹಲವು ಕಟ್ಟಡಗಳ ಶೋಧಕಾರ್ಯದಲ್ಲಿ ಬಳಸಿಕೊೞಲಾಗಿತು.
ಭಯೋತ್ಪಾದನೆ ನಿಗ್ರಹಕ್ಕಾಗಿಯೇ 1984 ರಲ್ಲಿ ರೂಪುಗೊಂಡ ಈ ತಂಡವನ್ನು ಹಲವು ಕಾರಣಗಳಿಂದ ಗಣ್ಯರ ಭದ್ರತೆಗೆ ಬಳಸಲಾಗಿತಿತ್ತು.