BW News Bureau : ಬೆಂಗಳೂರು ನಗರದ ಪ್ರೆಸ್ ಕ್ಲಬ್ ಆವರಣದಲ್ಲಿದ್ದ ಶ್ರೀಗಂಧದ ಮರವನ್ನು ರಾತ್ರೋ ರಾತ್ರಿ ಹೊತ್ತೊಯ್ಯಲಾಗಿದೆ. ರಾತ್ರಿ ಪ್ರೆಸ್ ಕ್ಲಬ್ ಆವರಣದೊಳಗೆ ನುಗ್ಗಿದ ಅಗಂತಕರು, 10 ರಿಂದ 15 ಅಡಿಗಳಷ್ಟು ಎತ್ತರದ ಶ್ರೀಗಂಧದ ಮರವನ್ನು ಕಟಾವು ಮಾಡಿ ಹೊತ್ತೊಯ್ಯಿದ್ದಿದ್ದಾರೆ.
ಪತ್ರಿಕಾಭವನದಲ್ಲಿ ಭದ್ರತಾ ಸಿಬ್ಬಂದಿ ಇದ್ದರೂ ಕಳವು ಪ್ರಕರಣ ನಡೆದಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಕರಣ ತಿಳಿದು ಸ್ಥಳಕ್ಕೆ ವಿಧಾನಸೌಧ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ , ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.