ನವದೆಹಲಿ : ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಜನಸಾಮಾನ್ಯ ಮಟ್ಟದಲ್ಲಿ ಉದ್ಯಮಶೀಲತೆ ಉತ್ತೇಜಿಸುವ ಗುರಿ ಹೊಂದಿರುವ ಸ್ಟಾರ್ಟ್ ಅಪ್ ಯೋಜನೆಯನ್ನು ಉದ್ಘಾಟಿಸಿ ಮಾತನಾಡುತ್ತ, ಈ ಯೊಜನೆಯಲ್ಲಿರುವ ಲಾಭಗಳನ್ನು ವಿವರಿಸಿದರು.
ಹೊಸದಾಗಿ ಕಂಪನಿ ಪ್ರಾರಂಭ ಮಾಡುವವರು ಇನ್ನು ಮುಂದೆ ಮೊಬೈಲ್ ಆಪ್ ಮೂಲಕ ಒಂದೇ ದಿನದಲ್ಲಿ ನೊಂದಣಿ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಸ್ಟಾರ್ಟ್ ಅಪ್ ಕಂಪನಿಗಳು ಮೊದಲ ಮೂರು ವರ್ಷ ಬಂದ ಲಾಭಕ್ಕೆ ತೆರಿಗೆ ಕಟ್ಟುವ ಅವಶ್ಯಕತೆ ಇರುವುದಿಲ್ಲ ಎನ್ನುವ ಸರ್ಕಾರದ ಘೋಷಣೆಯನ್ನು ನೆರೆದಿದ್ದ 1,000 ಉದ್ಯಮಿ ಚಪ್ಪಳೆಯ ಮೂಲಕ ಸ್ವಾಗತಿಸಿದರು.
ಆರಂಭಿಕ ಕಂಪನಿಗಳಿಗಾಗಿ ಸರ್ಕಾರದಿಂದ 10,000 ಕೋಟಿ ರೂ ನಿಧಿಯನ್ನು ತೆಗೆದಿರಿಸಲಾಗುವುದೆಂದರು.
ಸರ್ಕಾರದ ಕನಿಷ್ಠ ಹಸ್ತಕ್ಷೇಪದಲ್ಲಿ ಕೆಲಸ ನಡೆಯುವಂತಾಗಬೇಕು. ಸರ್ಕಾರ ಹಿಂದೆ ಸರಿದರೆ ತುಂಬಾ ಕೆಲಸ ಆಗಬಹುದು ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗಲೂ ಭಾರತದಲ್ಲಿ ಬಿಸಿನೆಸ್ ಮಾಡುವ ರೀತಿಯಲ್ಲಿ ಸುಧಾರಣೆಯಾಗಬೇಕು ಎಂದು ಹೇಳುತ್ತಲೇ ಬರುತ್ತಿದ್ದಾರೆ. ಮೋದಿ ಸರ್ಕಾರದ ನೇತೃತ್ವದಲ್ಲಿ ವಿಶ್ವ ಬಿಸಿನೆಸ್ ನಲ್ಲಿ ರ್ಯಾಂಕ್ ನಲ್ಲಿ ಭಾರತ 12 ಸ್ಥಾನ ಮೇಲೆಕ್ಕೇರಿದೆ.
ಸ್ಟಾರ್ಟ್ ಅಪ್ ಗಳಿಗೆ ಪೇಟೆಂಟ್ ಪಡೆಯುವುದು ಸಹ ಸುಲಭವಾಗಲಿದೆ. ಶೇ. 80 ರಿಬೇಟ್ ದೊರೆಯಲಿದೆ. ಸ್ಟಾರ್ಟ್ ಅಪ್ ಗಳಿಂದ ಸರ್ಕಾರ ಸರಕುಗಳನ್ನು ಖರೀದಿ ಮಾಡಿದಾಗ ಮತ್ತು ಸೇವೆಗಳನ್ನು ಪಡೆದಾಗಲಿನ ನೀತಿ ಇನ್ನು ಮುಂದೆ ಸರಳವಾಗಲಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ, ಆದರೆ ನಾವು ಆರಂಭಿಕ ಕಂಪನಿಗಳಿಗೆ ಅವಕಾಶ ನೀಡಲು ಬಯಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದರು.
ಸ್ಟಾರ್ಟ್ ಅಪ್ ಗಳಿಗೆ ಹಣ ಒಂದು ಉತ್ಪನ್ನವಾಗಿದೆ. ಅವರು ಜನರ ಜೀವನದಲ್ಲಿ ಬದಲಾವಣೆ ತರಲು ಬಯಸುತ್ತಾರೆ. ಆದ್ದರಿಂದ 5 ಜನರಿಗೆ ಕೆಲಸ ಕೊಟ್ಟರೂ ಅವರು ನಮ್ಮ ದೇಶವಗೆದುಕೊಂಡು ಹೋದಂತೆ ಎಂದು ಹೇಳೆ ಪ್ರಧಾನಿ ನರೇಂದ್ರ ಮೋದಿ ಅವರು ನರೆದಿದ್ದ ಉದ್ಯಮಿಗಳನ್ನು ಉತ್ತೇಜಿಸಿದರು.
ನಮ್ಮಲ್ಲಿ ಈಗ ಬಹಳ ಮಹಿಳೆಯರು ಉದ್ಯಮದಲ್ಲಿ ಆಸಕ್ತಿ ಹೊಂದಿದ್ದಾರೆ. ಮಹಿಳೆಯರಿಗಾಗಿ ನಮ್ಮ ಸರ್ಕಾರ ಮುಂದಿನ ದಿನಗಳಲ್ಲಿ ಕೆಲವು ಯೋಜನೆಯನ್ನು ಹೊರತರಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ, ಸಚಿವೆ ನಿರ್ಮಲಾ ಸೀತಾರಾಮನ್ ಮುಂತಾದವರು ಭಾಗವಹಿಸಿದ್ದರು.
ಚಿತ್ರದ ಕೃಪೆಃ www.pmindia.gov.in