ನವದೆಹಲಿ : ಮಂಗಳವಾರ ದೆಹಲಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉದ್ಯಮಿಗಳ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಸರ್ಕಾರ ನಿರಂತರ ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ನಮ್ಮ ಸರ್ಕಾರ ನಿಮ್ಮ ಸರ್ಕಾರ (ಆಪ್ ಕಿ ಸರ್ಕಾರ್), ನಾವು ನಿಮ್ಮ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಪ್ರಧಾನಿ ಹೇಳಿದರು.
ಆರ್ಥಿಕ ಸೇರ್ಪಡೆ ನಮ್ಮ ಗಮನದಲ್ಲಿರುವಂತಹ ವಿಷಯ. ನಾವು ಉದ್ಯೋಗ ಸೃಷ್ಠಿಸುವವರನ್ನು ಸೃಷ್ಠಿಸಲು ಬಯಸುತ್ತೇವೆ ಉದ್ಯೋಗಾಂಕಾಂಕ್ಷಿಗಳನಲ್ಲ. ಡಾ. ಬಿ ಆರ್ ಅಂಬೇಡ್ಕರ್ ಕೇವಲ ಸಂವಿಧಾನ ಶಿಲ್ಪಿಯಷ್ಟೇ ಅಲ್ಲ ಆರ್ಥಿಕ ತಜ್ಞರೂ ಆಗಿದ್ದರು ಎಂದು ತಿಳಿಸಿದರು.
ಉದ್ಯಮೀಕರಣ ದಲಿತ ಸಮುದಾಯಕ್ಕೆ ಹೆಚ್ಚಿನ ನೆರವು ನೀಡುತ್ತದೆ ಎಂದು ಬಾಬಾ ಸಾಹೇಬ್ ಸರಿಯಾಗಿ ನುಡಿದಿದ್ದರು ಎಂದು ಹೇಳಿ ನೆರೆದಿದ್ದ ಉದ್ಯಮಿಗಳನ್ನು ಪ್ರೋತ್ಸಾಹಿಸಿದರು.
ತಮ್ಮ ಸರ್ಕಾರ ಹಿಂದುಳಿದ ಜನರ ಸಹಾಯಕ್ಕಾಗಿ ಬಂಡವಾಳ ನಿಧಿ ಸ್ಥಾಪಿಸಿದೆ ಎಂದು ತಿಳಿಸಿದರು.