ಕೋಲಾರ : ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ನಕಲಿ ಸಿ ಡಿ ಪ್ರಕರಣವನ್ನು ಹಿಂಪಡೆದ ರಾಜ್ಯ ಸರ್ಕಾರದ ನಿರ್ಧಾರ ಮತ್ತು ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಮೇಲಿನ ಷಡ್ಯಂತ್ರವನ್ನು ವಿರೋಧಿಸಿ ಕೋಲಾರ ಜಿಲ್ಲೆಯ ಮುಳುಬಾಗಿಲುವಿನಲ್ಲಿ ಹಲವು ಹಿಂದೂ ಪರ ಸಂಘಟನೆಗಳಿಂದ, ತಾಲೂಕಿನ ತಹಶಿಲ್ದಾರರ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿ, ಪತ್ರಿಕ ಗೋಷ್ಠಿಯನ್ನು ನಡೆಸಲಾಯಿತು.
ರಾಘವೇಶ್ವರ ಶ್ರೀಗಳ ಮೇಲೆ ನಡೆಯುತ್ತಿರುವ ಷಡ್ಯಂತ್ರ ತತ್ ಕ್ಷಣ ನಿಲ್ಲದ್ದಿದ್ದರೆ, ಉಗ್ರರೀತಿಯ ಹೋರಾಟ ನಡೆಯುತ್ತದೆ ಎಚ್ಚರಿಕೆ ಇರಲಿ ಎಂದು ಭಜರಂಗಿ ಚಲಪತಿ ಹೇಳಿದರು. ರಾಜ್ಯ ಸರ್ಕಾರದ ಮೇಲೆ ಹರಿಹಾಯ್ದ ವಾಸುದೇವ ಅವರು ಉಗ್ರ ಹೋರಾಟ ನಡೆಸುವ ತೀರ್ಮಾನ ಸಭೆಗೆ ತಿಳಿಸಿದರು.
ವಿವಿದ ಹಿಂದೂ ಪರ ಸಂಘಟನೆಯ ಎಮ್.ಕೆ. ವಾಸುದೇವ, ಶ್ರೀನಿವಾಸಬಾಬು,ನರೇಂದ್ರ, ಕಾಪರ್ತಿ ಅಮರ, ಕೃಷ್ಣ ರೆಡ್ಡಿ,ವೆಂಕಟ ರೆಡ್ಡಿ, ಚಲಪತಿ ಭಜರಂಗಿ.ಆರ, ವಿಶ್ವನಾಥ (ಶ್ರೀರಾಮ ಸೇನೆ), ಜಿಲ್ಲಾ ಸಂಚಾಲಕರು, ವಿ.ಕೆ. ಅರುಣಕುಮಾರ, ಅರುಣ್.ಎಸ್, ನಾಗೇಶ, ಭಜರಂಗದಳದ ಕಿಶೋರ, ಕನ್ನಡ ಸಾಹಿತ್ಯ ಪರಿಷತ್ತಿನ ಶಂಕರ ಕೇಸರಿ, ಜಿ.ಕೃಷ್ಣಮೂರ್ತಿ, ರೈತ ಸಂಘದ ಕೊಟ್ಟೆಮರಿ ಮಂಜುನಾಥ ಮತ್ತು ಹಲವು ಕಾರ್ಯಕರ್ತರು ಭಾಗವಹಿಸಿದ್ದರು.
ಸರ್ಕಾರದ ವಿರುದ್ದ ಮತ್ತು ಷಡ್ಯಂತ್ರಿಗಳ ವಿರುದ್ದ ಹರಿಹಾಯ್ದ ಜನರು, ಒಂದೇ ಗೋಮಾತರಂ... ಶ್ರೀರಾಘವೇಶ್ವರಭಾರತಿ ಮಹಾಸ್ವಾಮಿಗಳಿಗೆ ಜೈ... ಎನ್ನುವ ಜಯ ಘೋಷ ಮೊಳಗಿಸಿದರು.
ಹಿಂದೂ ಪರ ಸಂಘಟನೆಗಳು, ಕರ್ನಾಟಕ ಸಾಹಿತ್ಯ ಪರಿಷತ್ ಮುಳಬಾಗಿಲು, ರೈತ ಸಂಘ, ಬ್ರಾಹ್ಮಣ ಸಂಘಗಳು ಬೆಂಬಲವನ್ನು ನೀಡಿದವು, ವಿವಿದ ಸಂಘಟನೆಯ ಸುಮಾರು 350ಕ್ಕೂ ಹೆಚ್ಚಿನ ಜನ ಭಾಗವಹಿಸಿದ್ದರು. ಜಿಲ್ಲಾ ಪಂಚಾಯಾತ್ ಚುನಾವಣೆಯ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ಕೈ ಬಿಟ್ಟು ಕೇವಲ ಮನವಿ ಸಲ್ಲಿಸಲಾಯಿತು. ಆದ್ದರಿಂದ ಡಿಸೆಂಬರ 27ರ ನಂತರ ಬೃಹತ್ ಪ್ರತಿಭಟನೆ ಮತ್ತು ಬಂದ್ ಆಚರಿಸಲು ನಿರ್ಧಾರಿಸಿದ್ದೇವೆ ಎಂದರು.
ಇದೇ ವಿಷಯವಾಗಿ ಮುಳಬಾಗಿಲು ಬ್ರಾಹ್ಮಣ ಸಂಘದವರು ತಹಶಿಲ್ದಾರರಿಗೆ ಮನವಿಯನ್ನು ಸಲ್ಲಿಸಿದರು. ಬ್ರಾಹ್ಮಣ ಸಂಘದ ಕೋಲಾರ ಜಿಲ್ಲಾದ್ಯಕ್ಷ ಮು.ಕೃ.ಪದ್ಮನಾಭರಾವ್, ತಾಲೂಕು ಅದ್ಯಕ್ಷ ಎಮ್.ಕೆ.ಶ್ರೀನಿವಾಸ, ವಿ.ಆರ, ಚಂದ್ರಶೇಖರ, ವಿ.ಎಸ್.ರಾಮಚಂದ್ರರಾವ್, ಜಿ.ಕೃಷ್ಣಮೊರೆ ಉಪಸ್ಥಿತರಿದ್ದರು.