Untitled Document
Sign Up | Login    
Dynamic website and Portals
  
December 7, 2015

ಕಾಲಕ್ಕೆ ತಕ್ಕಂತೆ ಜೀವನಕ್ರಮ ಬದಲಾದರೂ ಮೌಲ್ಯಗಳು ಬದಲಾಗುವುದಿಲ್ಲ: ರಾಘವೇಶ್ವರ ಶ್ರೀ

ಶ್ರೀಗಳಿಂದ ಭಾನುವಾರ ಲೋಕಾರ್ಪಣೆಗೊಂಡ ಆಪ್..  ಶ್ರೀಗಳಿಂದ ಭಾನುವಾರ ಲೋಕಾರ್ಪಣೆಗೊಂಡ ಆಪ್..

ಬೆಂಗಳೂರು : ರಾಮ ಎಂಬುದೇ ಎಲ್ಲ ಪ್ರಶ್ನೆಗೂ ಉತ್ತರವಾಗಿದೆ. ರಾಮ ಎಂದರೇ ಸತ್ಯ. ಕಾಲ ಬದಲಾದಂತೆ ಜೀವನಕ್ರಮಗಳು ಬದಲಾದರೂ ಮೌಲ್ಯಗಳು ಬದಲಾಗುವುದಿಲ್ಲ. ಕಾಲಕ್ಕೆ ತಕ್ಕಂತೆ ರೂಪ ಬದಲಾದರೂ ಸತ್ಯ ಬದಲಾಗುವುದಿಲ್ಲ. ಸತ್ಯದ ಮೌಲ್ಯ ಎಲ್ಲಿಯೂ ವ್ಯತ್ಯಾಸವಾಗುವುದಿಲ್ಲ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ನುಡಿದರು.

ಬೆಂಗಳೂರಿನ ಗಿರಿನಗರದ ಶ್ರೀ ರಾಮಾಶ್ರಮದಲ್ಲಿ ಭಾನುವಾರ, ನ.6ರಂದು ನೇರವೇರಿದ ರಾಮತಾರಕ ಹವನ ಹಾಗೂ 'ಗುರುಪದ' android app ಲೋಕಾರ್ಪಣೆ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ರಾಘವೇಶ್ವರ ಶ್ರೀಗಳು ಆಶೀರ್ವಚನ ನೀಡಿದರು.

'ರಾಮ' ಎಂಬ ಶಬ್ದದಿಂದ ಎಂತೆಂತಹ ಪರಿವರ್ತನೆಗಳು ನಡೆದು ಹೋಗಿವೆ. ಬೇಡನಾಗಿದ್ದ ವಾಲ್ಮೀಕಿ ರಾಮ ಶಬ್ದೋಚ್ಚಾರಣೆಯಿಂದ ರಾಮಾಯಣವನ್ನು ರಚಿಸುವ ಶಕ್ತಿಪಡೆದ; ಕಲ್ಲಾಗಿದ್ದ ಅಹಲ್ಯೆ ರಾಮನಿಂದ ಶಾಪಮುಕ್ತಳಾದಳು. ಅಂತೆಯೇ ಕೇವಲ ರಾಮ ಎಂಬ ಎರಡಕ್ಷರದ ಸ್ತುತಿಯಿಂದ ಎಲ್ಲ ಪಾಪ, ಶಾಪಗಳ ನಿವಾರಣೆಯಾಗುತ್ತದೆ; ಮತ್ತೊಮ್ಮೆ ಭಾವದಲದಲ್ಲಿ ಪುನೀತರಾಗುವಷ್ಟು ಶಕ್ತಿ ಇದೆ ರಾಮ ಶಬ್ದದಲ್ಲಿ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

"ಶ್ರೀ ರಾಮ ಜಯ ರಾಮ ಜಯ ಜಯ ರಾಮ" ಕೇವಲ ಇಷ್ಟರಲ್ಲಿ ಪೂರ್ತಿ ರಾಮಾಯಣ ಅಡಗಿದೆ. ಶ್ರೀ ಎಂದರೆ ಸೀತೆ, ಸೀತೆಗಾಗಿ ನಡೆದ ಮಹಾಯುದ್ಧದಲ್ಲಿ ರಾಮನ ಜಯವಾಯಿತು, ರಾಮನಿಗೆ, ಅಂದರೆ ಸತ್ಯಕ್ಕೆ ಯಾವತ್ತೂ ಜಯವಾಗಲಿದೆ.

ರಾಮ ತಾರಕದ ಮೂಲಕ ಸಮಾಜಕ್ಕೆ ಮಂಗಲವಾಗಲಿ, ತಾರಕ ಶಬ್ದಕ್ಕೆ ದಾಟಿಸು ಎಂಬ ಅರ್ಥ ಇದೆ. ರಾಮ ನಾಮ ತಾರಕವು ಸಮಾಜವನ್ನು ಕಷ್ಟಗಳಿಂದ ದಾಟಿಸಲಿ ಎಂದು ಹಾರೈಸಿದರು.

ಶ್ರೀಗಳ ನುಡಿಮುತ್ತುಗಳ (ಅಕ್ಷರ - ವೀಡಿಯೋ) ಸಂಗ್ರಹದ "ಗುರುಪದ" ಎಂಬ Android application( https://goo.gl/53KtsH) ಅನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು, ಶ್ರೀಮಠದ ನೂರಾರು ಶಿಷ್ಯ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Religion & Spirituality

ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
  • ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
  • ಶಬರಿಮಲೈ ದೇಗುಲಕ್ಕೆ ಮಹಿಳೆಯ ಪ್ರವೇಶ ಕುರಿತಾದ ಆರ್ಜಿಯನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.
  • ವೈಭವದ ದಸರಾ ಮಹೋತ್ಸವ: ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿ
  • ನಂದಿಧ್ವಜಕ್ಕೆ ಸಿಎಂ ಪೂಜೆ: ಜಂಬೂಸವಾರಿಗೆ ಚಾಲನೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited