ನವದೆಹಲಿ : ಅಸಹಿಷ್ಣುತೆ ಕುರಿತು ಹೇಳಿಕೆ ನೀಡಿದ್ದ ಬಾಲಿವುಡ್ ನಟ, ನಿರ್ಮಾಪಕ ಅಮೀರ್ ಖಾನ್ ಹೇಳಿಕೆಗೆ ಮಂಗಳವಾರ ಬಿಜೆಪಿ ತಿರುಗೇಟು ನೀಡಿದ್ದು, ಮುಸ್ಲಿಮರಿಗೆ ಭಾರತಕ್ಕಿಂತ ಸುರಕ್ಷಿತವಾದ ದೇಶ ಇನ್ನೊಂದಿಲ್ಲ, ಹಿಂದುಗಳಿಗಿಂತ ಒೞ್ಯೆಯ ನೆರೆಹೊರೆಯವರಿಲ್ಲ ಎಂದು ಹೇಳಿದೆ.
ಭಾರತ ನಿಮ್ಮನ್ನು ಸ್ಟಾರ್ ಆಗಿ ಮಾಡಿದೆ ಅದನ್ನು ಮರೆಯಬೇಡಿ ಎಂದು ಬಿಜೆಪಿ ಮುಖಂಡ ಶಹನವಾಜ್ ಹುಸೈನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಅಮೀರ್ ಖಾನ್ ಗೆ ಭಾರತಕ್ಕಿಂತ ಒೞೆಯ ದೇಶ ಸಿಗಲು ಸಾಧ್ಯವಿಲ್ಲ. ನಮ್ಮ ದೇಶ ಮಾತ್ರ ಕಲಾವಿದರ ಧರ್ಮವನ್ನು ನೋಡುವುದಿಲ್ಲ. ನೀವು ಭಾರತ ಬಿಟ್ಟರೆ ಎಲ್ಲಿ ಹೋದರೂ ಅಸಹಿಷ್ಣುತೆ ನೋಡುತ್ತೀರಿ ಎಂದು ಹುಸೈನ್ ಹೇಳಿದ್ದಾರೆ.
ಅಮೀರ್ ಖಾನ್ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ ರಾಹುಲ್ ಗಾಂಧಿಯ ಬಗ್ಗೆ ಮಾತನಾಡಿದ ಹುಸೈನ್, 1984ರಲ್ಲಿ ಸಿಕ್ಕರನ್ನು ಹತ್ಯೆ ಮಾಡುವ ಬದಲು ಮಾತುಕತೆಗೆ ಕರೆಯಬೇಕಾಗಿದ್ದ ಕಾಂಗ್ರೆಸ್ ಪಕ್ಷ, ದೇಶದಲ್ಲಿ ನೂರಾರು ಹಿಂಸಾಚಾರಗಳು ಸಂಘಟಿಸಿದ ಕಾಂಗ್ರೆಸ್ ಪಕ್ಷ ಸಹಿಷ್ಣುತೆಯ ಬಗ್ಗೆ ಭಾರತಕ್ಕೆ ಪಾಠ ಹೇಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಗೆ ಪ್ರಧಾನಿ ಮತ್ತು ಚುನಾಯಿತ ಸರ್ಕಾರದ ಜನಪ್ರಿಯತೆಯನ್ನು ಸಹಿಸಲು ಆಗುತ್ತಿಲ್ಲ ಎಂದು ಹೇಳಿದರು.
ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವ ಬಗ್ಗೆ ತೀವ್ರ ಆತಂಕಕ್ಕೊಳಗಾಗಿರುವ ತನ್ನ ಪತ್ನಿ ಕುಟುಂಬ ಸಮೇತ ದೇಶ ಬಿಟ್ಟು ಹೋಗುವ ಬಗ್ಗೆ ಪ್ರಸ್ತಾಪಿಸಿದ್ದಳು ಎಂದು ಅಮೀರ್ ಖಾನ್ ನಿನ್ನೆ ಹೇಳಿದ್ದರು.