ಕೌಲಲಾಂಪುರ : ಮೂರು ದಿನದ ಮಲ್ಯೇಷಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕೌಲಾಲಂಪುರದಲ್ಲಿರುವ ರಾಮಕೃಷ್ಣ ಮಿಷನ್ ಗೆ ಭೇಟಿ ನೀಡಿ ಸ್ವಾಮೀ ವಿವೇಕಾನಂದರ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಸ್ವಾಮೀ ವಿವೇಕಾನಂದರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಮಲ್ಯೇಷಿಯಾದ ನೆಲದಲ್ಲಿ ಸ್ವಾಮೀ ವಿವೇಕಾನಂದರ ಪ್ರತಿಮೆಯನ್ನು ಅನಾವರಣಗೊಳಿಸಿವುದು ನನ್ನ ಭಾಗ್ಯ. ಸ್ವಾಮೀ ವಿವೇಕಾನಂದ ಎನ್ನುವುದು ಕೇವಲ ಒಂದು ಹೆಸರಲ್ಲ, ಭಾರತದ ಆತ್ಮ ಎಂದು ಹೇಳಿದರು.
ವೇದಗಳ ಕಾಲದಿಂದ ವಿವೇಕಾನಂದರವರೆಗೆ ಭಾರತದ ಸಂಸ್ಕೃತಿ ಶ್ರೀಮಂತವಾಗಿದೆ. ವಿವೇಕಾನಂದ ಒಂದು ಹೆಸರಲ್ಲ, ಅವರು ಸಾವಿರಾರು ವರ್ಷದ ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಯ ಸಾಕಾರರೂಪ ಎಂದರು.
ಸ್ವಾಮೀ ವಿವೇಕಾನಂದರು ಸತ್ಯದ ಅನ್ವೇಷಣೆಯಲ್ಲಿದ್ದರು.ಅವರು ಯಾವುದೇ ಗುರುವಿಗಾಗಿ ನೋಡುತ್ತಿರಲಿಲ್ಲ. ಅದೇ ರೀತಿ ರಾಮಕೃಷ್ಣ ಪರಮಹಂಸರೂ ಕೂಡ ಯಾವುದೇ ಶಿಷ್ಯರನ್ನೂ ಹುಡುಕುತ್ತಿರಲಿಲ್ಲ. ಆದರೆ ಸತ್ಯದ ಅನ್ವೇಷಣೆ ಅವರಿಬ್ಬರನ್ನೂ ಸೇರಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.
ಸ್ವಾಮೀಜಿ ಜನ ಸೇವೆಯೇ ಪ್ರಭು ಸೇವೆ ಎಂದು ಹೇಳಿದ್ದಾರೆ.
ವಿಶ್ವದಲ್ಲಿ ಈಗ ಜಾಗತಿಕ ತಾಪಮಾನ ಕುರಿತು ಚರ್ಚೆ ನಡೆಯುತ್ತಿದೆ. ಆದರೆ ನಾವು ಗಿಡ-ಮರಗಳಲ್ಲಿ ಯಾವಾಗಲೂ ದೇವರನ್ನೇ ಕಂಡಿದ್ದೇವೆ. ವಾಸ್ತವವಾಗಿ ನಮ್ಮ ದೇವಾನುದೇವತೆಗಳನ್ನು ಪ್ರಕೃತಿಗೆಯ ಜೊತೆ ಸಂಬಂಧ ಕಲ್ಪಿಸಲಾಗಿದೆ . ನಾವು ಮರಗಳು, ಪ್ರಾಣಿಗಳು, ಪಕ್ಷಿಗಳು ಮೂಲಕ ವ್ಯಕ್ತಿಯಾಗಿ ನೋಡುತ್ತೇವೆ. ಈ ಪ್ರತಿಮೆ ಇಲ್ಲಿಯ ಜನರಿಗೆ ಸ್ಫೂರ್ತಿಯ ಮೂಲವಾಗುತ್ತದೆ ಎಂದು ನಾನು ನಂಬಿದ್ದೇನೆ ಎಂದು ಪ್ರಧಾನಿ ತಿಳಿಸಿದರು.
ನಂತರ ನೆರದಿದ್ದ ಜನರಿಗೆ ಸರಳ ಸಂದೇಶ ನೀಡಿದ ಪ್ರಧಾನಿ ನರೇಂದ್ರ ಮೋದಿ, ಪ್ರಕೃತಿಯನ್ನು ನಾವು ದುರ್ಬಳಕೆ ಮಾಡಬಾರದು. ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕ ಬೇಕು. ಇದೇ ಪ್ರಪಂಚವನ್ನು ಉಳಿಸುತ್ತದೆ ಎಂದರು.