ಕೌಲಾಲಂಪುರ : ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಹೂಡಿಕೆ ಸಮುದಾಯಕ್ಕೆ ಭಾರತದಲ್ಲಿ ಬಂದು ಹೂಡಿಕೆ ಮಾಡಿ ಎಂದು ಶನಿವಾರ ಕರೆ ನೀಡಿದರು.
ಎಲ್ಲಾ ಆರ್ಥಿಕ ಸೂಚಕದ ಪ್ರಕಾರ ನಾವು 18 ತಿಂಗಳ ಮೊದಲು ಅಧಿಕಾರವಹಿಸಿಕೊಂಡ ಸಮಯಕ್ಕಿಂತ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಸಿಯಾನ್ ವ್ಯಾಪಾರ ಮತ್ತು ಹೂಡಿಕೆ ಶೃಂಗಸಭೆಯಲ್ಲಿ ತಿಳಿಸಿದರು.
ಖಂದಿತ ಇದು ಆಕಸ್ಮಿಕವಾಗಿ ಆಗಿದ್ದಲ್ಲ. ವಿಶ್ವದ ಆರ್ಥಿಕತೆ ಸರಿಯಾಗಿಲ್ಲ. ಈ ಯಶಸ್ಸು, ಯಶಸ್ವೀ ನೀತಿಗಳ ಫಲಶೃತಿ. ಕಲ್ಪನೆ ಸುಧಾರಣೆ ಮಾತ್ರವಲ್ಲ ರೂಪಾಂತರಕ್ಕಾಗಿ ಸುಧಾರಣೆ ಎಂದರು.
ಹೆಚ್ಚಾಗಿ ಎಲ್ಲಾ ಆಸಿಯಾನ್ ದೇಶಗಳೂ ಏಷ್ಯಾದ ಆರ್ಥಿಕತೆಗಾಗಿ ತಮ್ಮ ಕೊಡುಗೆ ನೀಡಿವೆ. ಈಗ ಭಾರತದ ಸರದಿ ಎಂದು ಪ್ರಧಾನಿ ಹೇಳಿದರು.
ನಮ್ಮ ಸಮಯ ಬಂದಿದೆ ಎಂದು ನಮಗೆ ಗೊತ್ತು.
ಭಾರತವನ್ನು ಹೂಡಿಕೆ ಸ್ನೇಹಿ ಸ್ಥಳವನ್ನಾಗಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳಾದ ಮೇಕ್ ಇನ್ ಇಂಡಿಯಾ,ಡಿಜಿಟಲ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾದ ಬಗ್ಗೆ ನೆರದಿದವರಿಗೆ ವಿವರಿಸಿದ ಪ್ರಧಾನಿ ನರೇಂದ್ರ ಮೋದಿ, ಭಾರತಕ್ಕೆ ಬಂದು ಅಲ್ಲಿ ಅಗುತ್ತಿರುವ ಬದಲಾವಣೆಯ ಗಾಳಿಯನ್ನು ನೋಡಿ ಎಂದು ನಾನು ತಮ್ಮೆಲ್ಲರನ್ನು ಆಹ್ವಾನಿಸುತ್ತೇನೆ ಎಂದರು.
ಗಾಳಿ ಗಡಿ ದಾಟಲು ಸಮಯ ತೆಗೆದುಕೊೞುತ್ತದೆ. ಆದ್ದರಿಂದ ತಮ್ಮನ್ನು ಆಹ್ವಾನಿಸಲು ನಾನು ಇಲ್ಲಿ ಸ್ವತಃ ಬಂದಿದ್ದೇನೆ ಎಂದರು.
ಸಂಕೀರ್ಣ ಕಾರ್ಯವಿಧಾನಗಳನ್ನು ತೆಗೆದು ಅವೆಲ್ಲವೂ ಒಂದೇ ಕಡೆ ಸಿಗುವಂತೆ ಮಾಡಲು ಮತ್ತು ಎಲ್ಲಾ ಅರ್ಜಿಗಳ ರೂಪವನ್ನು ಸುಲಭಗೊಳಿಸಲು ನಮ್ಮ ಸರ್ಕಾರ ಅತ್ಯಂತ ಕಷ್ಟಪಟ್ಟು ಕೆಲಸ ಮಾಡುತ್ತಿದೆ. ಆದ್ದರಿಂದ ವಿಶ್ವ ಬ್ಯಾಂಕ್ ನ ಈಸ್ ಆಫ್ ಡುಯಿಂಗ್ ಬಿಸಿನೆಸ್ ವರದಿ 2016 ರಲ್ಲಿ ನಾವು 12 ಸ್ಥಾನ ಮೇಲಕ್ಕೇರಿದ್ದೇವೆ ಎಂದು ತಿಳಿಸಿದರು.