ಅಮೃತಸರ : ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ರಕ್ಷಣಾ ಪಡೆಗಳೊಂದಿಗೆ ದೀಪಾವಳಿ ಆಚರಿಸಿದರು. ಅವರ ಶೌರ್ಯ ಮತ್ತು ಪಾತ್ರದ ಕಾರಣ ಪ್ರಪಂಚ ಗೌರವದೊಂದಿಗೆ ಭಾರತವನ್ನು ನೋಡುತ್ತದೆ ಎಂದು ಅವರು ಈ ಸಂದರ್ಭದಲ್ಲಿ ನುಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಅಮೃತಸರದ ಖಾಸಾದಲ್ಲಿ ಭಾರತೀಯ ಪಡೆಗಳು ಸೆ. 22 1965 ನಲ್ಲಿ ಯುದ್ಧ ಗೆದ್ದ ಡೋಗ್ರೈ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಮರ್ಪಣೆ ಮಾಡಿದರು.
ರಕ್ಷಣಾ ಪಡೆಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಾನು ನಿಮ್ಮೊಂದಿಗೆ ದೀಪಾವಳಿ ಆಚರಿಸಲು ಬಂದಿದ್ದೇನೆ. ಈ ಅವಕಾಶ ಸಿಕ್ಕಿದ್ದಕ್ಕಾಗಿ ನನಗೆ ಖುಶಿಯಾಗಿದೆ ಎಂದು ಹೇಳಿದರು.
ನಿಮ್ಮ ಶೌರ್ಯ, ಸಮರ್ಪಣೆ ಮತ್ತು ಕನಸಿನಿಂದ ಇಡೀ ವಿಶ್ವವೇ ಭಾರತವನ್ನು ಗೌರವದಿಂದ ನೋಡುತ್ತದೆ. ಇದು ಕೇವಲ ಸಮವಸ್ತ್ರ ಮಾತ್ರದಿಂದಲ್ಲ ಸಶಸ್ತ್ರ ಪಡೆಗಳ ಗುಣಲಕ್ಷಣಗಳಿಂದ ಎಂದು ಹೇಳಿದರು.
ಹಲವು ವರ್ಷಗಳಿಂದ ಪಡೆಗಳಿಗೆ ನೇತೃತ್ವ ವಹಿಸಿದ ಎಲ್ಲರಿಗೂ ನಾನು ಅಭಿನಂದಿಸುತ್ತೇನೆ ಎಂದು ನುಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ದೇಶದ ಜನತೆಗೆ ಶುಭಾಷಯ ಕೋರಿದ್ದಾರೆ.
ಇದು ಪ್ರಧಾನಿ ಆದ ಮೇಲೆ ನರೇಂದ್ರ ಮೋದಿ ಅವರು ರಕ್ಷಣಾ ಪಡೆಗಳೊಂದಿಗೆ ಕಳೆಯುತ್ತಿರುವ ಎರಡನೇ ದೀಪಾವಳಿ.