ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಪ್ರದೇಸದ ದಾದ್ರಿ ಘಟನೆಯನ್ನು ಖಂಡಿಸಿ, ಇದೊಂದು ದುರದೃಷ್ಟಕರ ಘಟನೆ ಎಂದು ಹೇಳಿದ್ದಾರೆ.
ಆದರೆ, ಕೇಂದ್ರ ಸರ್ಕಾರಕ್ಕೆ ಈ ಘಟನೆಗಳಿಗೆ ಸಂಬಂಧ ಇಲ್ಲ. ಈ ಘಟನೆ ರಾಜ್ಯ ಸರ್ಕಾರದ ಕಾನೂನು ಸುವ್ಯವಸ್ಥೆಗೆ ಸಂಬಂಧಪಟ್ಟ ವಿಷಯ ಎಂದು ಪ್ರಧಾನಿ ಮೋದಿ ಆನಂದ್ ಬಜಾರ್ ಪತ್ರಿಕೆಗೆ ಕೊಟ್ಟ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಬಿಜೆಪಿ ಮತ್ತು ಕೇಂದ್ರದಲ್ಲಿರುವ ಸರ್ಕಾರ ಇಂತಹ ಘಟನೆಗಳು ಬೆಂಬಲಿಸುವುದಿಲ್ಲ. ಬಿಜೆಪಿ ಯಾವಾಗಲೂ ನಕಲಿ ಜಾತ್ಯತೀತತೆಯ ವಿರುದ್ಧ. ವಿರೋಧಿಗಳು ಅಲ್ಪಸಂಖ್ಯಾತರ ಮತಕ್ಕಾಗಿ ಧ್ರುವೀಕರಣದ ರಾಜಕೀಯ ಮಾಡುತ್ತಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.
ದಾದ್ರಿಯ ದೇವಳವೊಂದರ ಧ್ವನಿವರ್ಧಕದಲ್ಲಿ ಮುಸ್ಲಿಂ ಕುಟುಂಬವೊಂದು ಗೋಮಾಂಸ ಭಕ್ಷಣೆ ಮಾಡಿದೆ ಮತ್ತು ಗೋಮಾಂಸವನ್ನು ತಮ್ಮ ಮನೆಯಲ್ಲಿ ಶೇಖರಿಸಿಟ್ಟುಕೊಂಡಿದೆ ಎಂದು ಮಾಡಲಾದ ಘೋಷಣೆಯನ್ನು ಕೇಳಿಕೊಂಡು ಉದ್ರಿಕ್ತರಾದ ಸುಮಾರು 200 ಜನರ ಗುಂಪೊಂದು ಕಳೆದ ವಾರ ಇಖ್ಲಾಕ್ ಅವರನ್ನು ಅವರ ಮನೆಯಿಂದ ಹೊರಗೆಳೆದು ಹೊಡೆದು ಸಾಯಿಸಿತ್ತು.