ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು 83 ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಭಾರತೀಯ ವಾಯುಸೇನೆಗೆ ಶುಭಾಷಯ ಕೋರಿ, ವಾಯುಸೇನೆ ಧೈರ್ಯದಿಂದ ದೇಶ ಸೇವೆ ಮಾಡಿದೆ, ವಿಪತ್ತಿನ ಸಮಯದಲ್ಲಿ ರಕ್ಷಣೆ ಮಾಡುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿದೆ ಎಂದು ಹೇಳಿದ್ದಾರೆ.
ವಾಯುಪಡೆಯ ದಿನದಂದು ನಮ್ಮ ವಾಯುಪಡೆಯ ಸಿಬ್ಬಂದಿಗೆ ಸೆಲ್ಯೂಟ್ ಮಾಡುತ್ತೇನೆ. ಅವರು ಯಾವಾಗಲೂ ಧೈರ್ಯ ಮತ್ತು ಸಂಕಲ್ಪದಿಂದ ದೇಶ ಸೇವೆ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ನಮ್ಮ ವಾಯುಪಡೆಯ ಕೊಡುಗೆ ನೆನೆಪಿನಲ್ಲಿಡುವಂತದ್ದು. ವಿಪತ್ತಿನ ಕಾಲದಲ್ಲಿ ಅವರು ಮುಂಚೂಣಿಯಲ್ಲಿದ್ದು ಯಾವಾಗಲೂ ರಕ್ಷಣೆ ಕಾರ್ಯ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಗುರುವಾರ ಭಾರತೀಯ ವಾಯುಪಡೆ ತನ್ನ 83 ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ.