ನವದೆಹಲಿ : ಪಾಕಿಸ್ತಾನ ಭಯೋತ್ಪಾದನೆಯ ಪ್ರಧಾನ ಪ್ರಾಯೋಜಕ ಎಂದು ಬುಧವಾರ ಹೇಳಿದ ಭಾರತ, ಪಾಕ್ ಆಕ್ರಮಿತ ಕಾಶ್ಮೀರದಿಂದ ಜಾಗ ಖಾಲಿ ಮಾಡಿ ಎಂದು ಹೇಳಿದೆ.
ಪಾಕಿಸ್ತಾನ ಭಯೋತ್ಪಾದನೆಗೆ ಪ್ರಮುಖವಾಗಿ ಬಲಿಯಾದ ದೇಶ ಅಲ್ಲ, ಆದರೆ ತನ್ನದೇ ಆದ ನೀತಿಗಳಿಗೆ ಬಲಿಯಾಗಿದೆ. ವಾಸ್ತವವಾಗಿ ಪಾಕಿಸ್ತಾನ ಭಯೋತ್ಪಾದನೆಯ ಪ್ರಧಾನ ಪ್ರಾಯೋಜಕ. ಭಯೋತ್ಪಾದಕರ ಹುಟ್ಟು ಹಾಕಿದ ಕಾರಣದಿಂದ ಪಾಕಿಸ್ತಾನದಲ್ಲಿ ಅಸ್ಥಿರತೆ ಇದೆ. ನೆರೆಯವರನ್ನು ತೆಗಳುವುದರಿಂದ ಪರಿಹಾರ ಸಿಗುವುದಿಲ್ಲ ಎಂದು ಬುಧವಾರ ವಿದೇಶಾಂಗ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ವಿಶ್ವಸಂಸ್ಥೆಯಲ್ಲಿ, ಎಂದಿನಂತೆ ಪಾಕಿಸ್ತಾನ ಭಯೋತ್ಪಾದನೆಗೆ ಬಲಿಯಾದ ದೇಶ, ಕಾಶ್ಮೀರವನ್ನು ಮಿಲಿಟರಿ ಮುಕ್ತಗೊಳಿಸಬೇಕು ಮತ್ತು ರಾಜ್ಯಕ್ಕೆ ಸ್ವಯಂ ನಿರ್ಣಯ ತೆಗೆದುಕೊೞುವ ಹಕ್ಕು ನೀಡಬೇಕು ಎಂದು ಹೇಳಿದ ನಂತರ ಭಾರತ್ ಈ ರೀತಿಯಾಗಿ ತಿರುಗೇಟು ನೀಡಿದೆ.
ಪಾಕಿಸ್ತಾನವನ್ನು ಭಯೋತ್ಪಾದನಾ ಮುಕ್ತವನ್ನಾಗಿಸಿ, ಕಾಶ್ಮೀರವನ್ನು ಮಿಲಿಟರಿ ಮುಕ್ತವಾಗಿಸುವುದು ಸಮಸ್ಯೆಗೆ ಉತ್ತರವಲ್ಲ ಎಂದು ಸ್ವರೂಪ್ ತಿರುಗೇಟು ನೀಡಿದ್ದಾರೆ.
ಬಹುಶಃ ಇದು ದಶಕಗಳಲ್ಲಿ ಭಾರತದ ಕಟ್ಟುನಿಟ್ಟಾದ ಪ್ರತಿಕ್ರಿಯೆಯಾಗಿದೆ.