ಮಥುರಾ : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಉತ್ತರಪ್ರದೇಶದ ಮಥುರಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ಎಲ್ಲಾ ಕಾರ್ಯಕರ್ತರ ಡಿ ಎನ್ ಎ ದಲ್ಲೇ ಕಾಂಗ್ರೆಸ್ ಇದೆ. ನಾನು ನಿಮ್ಮ ಮುಖಂಡನಲ್ಲ ಆದರೆ ಈ ಕುಟುಂಬದ ಒಂದು ಭಾಗ ಎಂದು ರಾಹುಲ್ ಹೇಳಿದರು. ಪಕ್ಷದ ಎಲ್ಲಾ ಕಾರ್ಯಕರ್ತರು ನಮ್ಮ ಕುಟುಂಬದವರು. ಯಾರನ್ನೂ ಈ ಕುಟುಂಬದಿಂದ ತೆಗೆಯಲಾಗುವುದಿಲ್ಲ. ನಾವು ಒಪ್ಪುತ್ತೇವೋ ಇಲ್ಲವೋ ಆದರೆ ಎಲ್ಲರ ಅಭಿಪ್ರಾಯಗಳನ್ನೂ ಸ್ವೀಕರಿಸುತ್ತೇವೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಮೋದಿ ಅವರು ಹೆದರಬೇಡಿ ಒೞೆಯ ದಿನ ಬರುತ್ತದೆ ಎಂದು ಹೇಳಿದ್ದರು. ಆದರೆ ಈಗ ರೈತರು ಆತ್ಮಹತ್ಯೆ ಮಾಡಿಕೊೞುತ್ತಿದ್ದಾರೆ. ಪ್ರಧಾನಿ ಅವರು ಚುನಾವಣಾ ಸಮಯದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲಿಲ್ಲ ಎಂದು ಹೇಳಿದರು.
ಉತ್ತರಪ್ರದೇಶದಲ್ಲಿ ಕಳೆದುಕೊಂಡ ಅಸ್ತಿತ್ವವನ್ನು ಮರಳಿ ಪಡೆಯಲು ಆರ್ ಎಸ್ ಎಸ್ ರೀತಿಯ ಕಟ್ಟುನಿಟ್ಟಿನ ಶ್ರೇಣಿ ಪದ್ದತಿಯನ್ನು ಪಾಲಿಸದೇ, ಸ್ಟೀವ್ ಜೊಬ್ಸ್ ಅವರ ಆಪಲ್ ಸಂಸ್ಥೆಯ ಟೀಮ್ ಸಂಪ್ರದಾಯವನ್ನು ಪಕ್ಷದ ಕಾರ್ಯಕರ್ತರು ಪಾಲಿಸಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದರು.
ಪಕ್ಷ ಸ್ಟೀವ್ ಜೊಬ್ಸ್ ಅವರ ಆಪಲ್ ಸಂಸ್ಥೆಯಂತೆ ಕಾರ್ಯ ನಿರ್ವಹಿಸಬೇಕು. ಕೇವಲ ಮುಖಂಡರ ಅಭಿಪ್ರಾಯಗಳಲ್ಲದೇ ಪಕ್ಷದಲ್ಲಿ ಎಲ್ಲರ ಅಭಿಪ್ರಾಯಗಳನ್ನು ಸ್ವೀಕರಿಸಬೇಕು. ನಾವು ಕಾಂಗ್ರೆಸ್ ನಲ್ಲಿ ವಿವಿಧ ಸಿದ್ಧಾಂತಗಳನ್ನು ಹೊಂದಿದವರಿಗೆ ಅವಕಾಶ ನೀದುತ್ತೇವೆ ಎಂದು ರಾಹುಲ್ ಗಾಂಧಿ ಮಥುರಾದಲ್ಲಿ ನಡೆಯುತ್ತಿರುವ ಚಿಂತನ ಶಿಬಿರದಲ್ಲಿ ತಿಳಿಸಿದರು.