ಕಲಬುರಗಿ : ಶನಿವಾರ ಮುಂಜಾನೆ ಕಲಬುರಗಿಯ ಚಿತ್ತಾಪುರ ತಾಲೂಕಿನ ಮರತೂರ ಎಂಬಲ್ಲಿ ದುರಂತೋ ಎಕ್ಸ್ ಪ್ರೆಸ್ ನ ಸುಮಾರು 8 ಬೋಗಿಗಳು ಹಳಿತಪ್ಪಿದ ಪರಿಣಾಮ ಇಬ್ಬರು ಮರಣ ಹೊಂದಿದ್ದು, ಎಂಟು ಜನರಿಗೆ ಗಾಯಗಳಾಗಿವೆ.
ಕಲಬುರಗಿಯಿಂದ 20 ಕಿ.ಮಿ. ದೂರದಲ್ಲಿರುವ ಮರತೂರು ರೈಲ್ವೇ ನಿಲ್ದಾಣದಲ್ಲಿ ಈ ದುರ್ಘಟನೆ ಸಂಭವಿಸಿದೆ. ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದು ಎಂಟು ಜನರಿಗೆ ಗಾಯಗಳಾಗಿವೆ. ಬೆಳಗಿನ ಜಾವ 2:15 ರಿಂದ್ 2:20 ರ ಮಧ್ಯೆ 9 ಬೋಗಿಗಳು ಹಳಿತಪ್ಪಿವೆ ಎಂದು ಕಲಬುರಗಿ ಎಸ್ ಪಿ ಅಮಿತ್ ಸಿಂಗ್ ತಿಳಿಸಿದ್ದಾರೆ.
ಘಟನೆ ನಡೆದ ತಕ್ಷಣ ರಕ್ಷಣಾ ಕಾರ್ಯಾಚರಣೆ ಪ್ರಾರಂಭಗೊಂಡಿದ್ದು ಗಾಯಾಳುಗಳನ್ನು ಸಮೀಪದ ಸೊಲ್ಹಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸಹಾಯವಾಣಿ ಸಂಖ್ಯೆಗಳು: ಗುಲ್ಬರ್ಗಾ:0847-2255066/2255067, ಸಿಕಂದರಾಬಾದ್: 040-27700968, ಸೊಲ್ಹಾಪುರ: 0217-2313331 ಛತ್ರಪತಿ ಶಿವಾಜಿ ಟರ್ಮಿನಲ್: 022-22694040, ಲೋಕಮಾನ್ಯ ತಿಲಕ್ ಟರ್ಮಿನಲ್: 022-25280005, ಮತ್ತು ಕಲ್ಯಾಣ್: 0251-2311499.