Untitled Document
Sign Up | Login    
Dynamic website and Portals
  
September 11, 2015

ಬಿಬಿಎಂಪಿ ಆಡಳಿತ ಚುಕ್ಕಾಣಿ ಕಾಂಗ್ರೆಸ್ ಮೈತ್ರಿಕೂಟದ ತೆಕ್ಕೆಗೆ

ಕಾಂಗ್ರೆಸ್ ಮೈತ್ರಿಕೂಟದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ರೆಡ್ಡಿ ಮೇಯರ್, ಜೆಡಿಎಸ್ ಅಭ್ಯರ್ಥಿ ಹೇಮಲತಾ ಉಪಮೇಯರ್

ಬಿಬಿಎಂಪಿ ಮೇಯರ್  - ಉಪಮೇಯರ್ ಚುನಾವಣೆ ಬಿಬಿಎಂಪಿ ಮೇಯರ್ - ಉಪಮೇಯರ್ ಚುನಾವಣೆ

BW News Bureau : ಶುಕ್ರವಾರ ನಡೆದ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಬಿ ಎನ್ ಮಂಜುನಾಥ ರೆಡ್ಡಿ ಬಹುಮತ ಗಳಿಸಿ ಮೇಯರ್ ಸ್ಥಾನಕ್ಕೆ ಆಯ್ಕೆ ಆಗಿದ್ದಾರೆ. ಈ ಮೂಲಕ ಬಿಬಿಎಂಪಿ ಆಡಳಿತ ಕಾಂಗ್ರೆಸ್ ಮೈತ್ರಿಕೂಟದ ಪಾಲಾಗಿದೆ.

ಬಿ ಎನ್ ಮಂಜುನಾಥ ರೆಡ್ಡಿ ಮಡಿವಾಳ ವಾರ್ಡ್ ಸದಸ್ಯ. ಮೊದಲ ಬಾರಿಗೆ ಮೇಯರ್ ಆಗಿ ಮಂಜುನಾಥ ರೆಡ್ಡಿ ಆಯ್ಕೆಯಾಗಿದ್ದಾರೆ. ಮೂರನೇ ಬಾರಿಗೆ ಕಾರ್ಪೋರೇಟರ್ ಆಗಿ ಆಯ್ಕೆಯಾಗಿದ್ದರು. ಬಿಎ ಪಧವೀಧರರಾಗಿರುವ ಮಂಜುನಾಥ ರೆಡ್ಡಿ ಈಗ ಬೆಂಗಳೂರಿನ ಪ್ರಥಮ ಪ್ರಜೆ.

ಬೆಂಗಳೂರು ನಗರ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ನಡೆದ ಈ ಚುನಾವಣೆಯಲ್ಲಿ, ಸದಸ್ಯರು ಕೈ ಎತ್ತಿ ಮತ ಚಲಾಯಿಸಿದರು. ಇದರಲ್ಲಿ ಕಾಂಗ್ರೆಸ್ಬಿ ಎನ್ ಮಂಜುನಾಥ ರೆಡ್ಡಿ 131 ಮತಗಳಿಸಿ, ಮೇಯರ್ ಸ್ಥಾನಕ್ಕೆ ಬೇಕಾದ ಬಹುಮತಗಳಿಸಿದರು. ಬಿಜೆಪಿ ಅಭ್ಯರ್ಥಿಯಾಗಿ ಮಂಜುನಾಥ ರಾಜು ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಮಂಜುನಾಥ ರಾಜು ಪರ 128 ಮತಗಳು ಚಲಾವಣೆಯಾಗೊಂಡು ಪರಾಭವಗೊಂಡರು. ಮಂಜುನಾಥ ರಾಜು ಕಾಡುಮಲ್ಲೇಶ್ವರ ವಾರ್ಡ್ ಸದಸ್ಯರಾಗಿದ್ದರು.

ಮೇಯರ್ ಆಯ್ಕೆಯ ನಂತರ ನಡೆದ ಉಪಮೇಯರ್ ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್ ನ ಎಸ್ ಪಿ ಹೇಮಲತಾ 131 ಮತಗಳಿಸಿ, ಉಪಮೇಯರ್ ಆಗಿ ಆಯ್ಕೆಯಾದರು. ಹೇಮಲತಾ ಅವರು ವೃಷಭಾವತಿನಗರ ವಾರ್ಡ್ ನ ಸದಸ್ಯೆ. ಬಿಜೆಪಿಯಿಂದ ಎಚ್ ಸಿ ನಾಗರತ್ನ ರಾಮಮೂರ್ತಿ ಸ್ಪರ್ಥಿಸಿದ್ದರು. ಎಚ್ ಸಿ ನಾಗರತ್ನ ರಾಮಮೂರ್ತಿ ಪಟ್ಟಾಭಿರಾಮನಗರ ವಾರ್ಡ್ ಸದಸ್ಯೆ.

ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 101 ಸ್ಥಾನಗಳಿಸಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರರು ಮಾಡಿಕೊಂಡ ಮೈತ್ರಿಯಿಂದ ಮೇಯರ್ - ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಸರಳ ಬಹುಮತಗಳಿಸಿ ಬಿಬಿಎಂಪಿ ಚುಕ್ಕಾಣಿ ಕಾಂಗ್ರೆಸ್ ಮೈತ್ರಿಕೂಟದ ಪಾಲಾಯಿತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : BBMP

ರಸ್ತೆ ಗುಂಡಿ ಮುಚ್ಚಲು 10 ದಿನಗಳ ಗಡುವು: ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಆದೇಶ
  • ರಸ್ತೆ ಗುಂಡಿ ಮುಚ್ಚಲು 10 ದಿನಗಳ ಗಡುವು: ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಆದೇಶ
  • ನಗರದ ರಸ್ತೆ ಗುಂಡಿಗಳನ್ನು 10 ದಿನದೊಳಗೆ ಮುಚ್ಚುವಂತೆ ಸಿಎಂ ಸಿದ್ದರಾಮಯ್ಯ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಖಡಕ್ ಸೂಚನೆ ರವಾನಿಸಿದ್ದಾರೆ.
  • ಬಿಬಿಎಂಪಿ ನೂತನ ಆಯುಕ್ತರಾಗಿ ಮಂಜುನಾಥ್ ಪ್ರಸಾದ್ ನೇಮಕ
  • ಬೆಂಗಳೂರಲ್ಲಿ ಕಸ ವಿಂಗಡಣೆ ಕಡ್ಡಾಯಗೊಳಿಸಿ ಹೈಕೋರ್ಟ್ ಆದೇಶ; ಉಲ್ಲಂಘನೆಗೆ ಭಾರೀ ದಂಡ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited