Untitled Document
Sign Up | Login    
Dynamic website and Portals
  
August 22, 2015

ಭಯೋತ್ಪಾದನೆಯಿಂದ ವಿಷಯಾಂತರವಾದರೆ ಎನ್ ಎಸ್ ಎ ಹಂತದ ಮಾತುಕತೆ ಇಲ್ಲಃ ಸುಷ್ಮಾ ಸ್ವರಾಜ್

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ (ಫೈಲ್ ಚಿತ್ರ) ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ (ಫೈಲ್ ಚಿತ್ರ)

ನವದೆಹಲಿ : ಕಾಶ್ಮೀರ ಸಮಸ್ಯೆ ಮತ್ತು ಹುರಿಯತ್ ನಾಯಕರನ್ನು ಮೂರನೇ ವ್ಯಕ್ತಿಗಳಾಗಿ ಮಾತುಕತೆಗೆ ಪಾಕಿಸ್ತಾನ ಒತ್ತಾಯಿಸಿದರೆ, ಪಾಕಿಸ್ತಾನದ ಜೊತೆ ಮಾತುಕತೆ ಇಲ್ಲ ಎಂದು ಶನಿವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಭಾರತ-ಪಾಕಿಸ್ತಾನ ರಾಷ್ಟ್ರೀಯ ಭದ್ರತೆಗೆ ಸಲಹೆಗಾರರು ಮಧ್ಯೆ ಮಾತುಕತೆ ಕೇವಲ ಭಯೋತ್ಪಾದನೆ ಕುರಿತು ಗಮನ ಹರಿಸಬೇಕು ಎಂದು ಹೇಳಿದರು.

ಸಿಮ್ಲಾ ಒಪ್ಪಂದದ ಪ್ರಕಾರ ಮಾತುಕತೆಯಲ್ಲಿ ಮೂರನೇ ವ್ಯಕ್ತಿಗಳು ಭಾಗವಹಿಸಬಾರದು ಮತ್ತು ಉಫಾ ಹೇಳಿಕೆಯಂತೆ ಭಯೋತ್ಪಾದನೆ ಕುರಿತು ಮಾತ್ರ ಮಾತುಕತೆ ನಡೆಯಬೇಕೆಂದು ಹೇಳಿದರು.

ಪಾಕಿಸ್ತಾನ ಕಾಶ್ಮೀರದ ಸಮಸ್ಯೆ ಪ್ರಮುಖವಾದದ್ದು ಎಂದು ಹೇಳುತ್ತಿದೆ. ಆದರೆ ಉಫಾದಲ್ಲಿ ಅವರು ಇದನ್ನು ಹೇಳಿರಲಿಲ್ಲ. ಮೊದಲು ಭಯೋತ್ಪಾದನೆ ಕುರಿತು ಮಾತುಕತೆ ನಂತರ ಕಾಶ್ಮೀರ ಸಮಸ್ಯೆ ಎಂದು ಸುಷ್ಮಾ ಸ್ವರಾಜ್ ಹೇಳಿದರು.

ಪಾಕಿಸ್ತಾನ ರಾಷ್ಟ್ರೀಯ ಭದ್ರತೆಗೆ ಸಲಹೆಗಾರ ಸರ್ತಾಜ್ ಅಜೀಜ್ ಮತ್ತು ಭಾರತರಾಷ್ಟ್ರೀಯ ಭದ್ರತೆಗೆ ಸಲಹೆಗಾರ ಅಜಿತ್ ದೊವೆಲ್ ನಡುವೆ ಆ.23-24 ರಂದು ಮಾತುಕತೆ ನಿಗದಿಯಾಗಿದೆ.

ಒಂದು ವೇಳೆ ಪಾಕಿಸ್ತಾನ ಮಾತುಕತೆಯಲ್ಲಿ ಕಾಶ್ಮೀರ ಸಮಸ್ಯೆಯನ್ನು ಸೇರಿಸಲು ಒತ್ತಾಯಿಸಿದರೆ ಭಾರತದ ನಡೆ ಏನು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಷ್ಮಾ ಸ್ವರಾಜ್, ಮಾತುಕತೆ ನಡೆಯುವುದಿಲ್ಲ ಎಂದು ಹೇಳಿದರು.

ಬಂದು ಭಯೋತ್ಪಾದನೆಯ ಕುರಿತು ಮಾತನಾಡಿ, ನಾವು ನಿಮ್ಮನ್ನು ಸ್ವಾಗತಿಸುತ್ತೇವೆ ಎಂದು ಸಚಿವೆ ಹೇಳಿದರು.

ಪಾಕಿಸ್ತಾನದ ನಾಯಕರು ದೇಶೀಯ ಒತ್ತಡಗಳಿಗೆ ದುರ್ಬಲರಾಗಿದ್ದಾರೆ, ಮಾತುಕತೆಯಿಂದ ತಪ್ಪಿಸಿಕೊೞಲು ಪ್ರಯತ್ನಿಸುತ್ತಿದ್ದಾರೆ. ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಅವರ್ ಉಫಾ ಹೇಳಿಕೆ, ಅವರು ದೇಶಕ್ಕೆ ವಾಪಾಸಾದ ನಂತರ ಚರ್ಚೆಗೆ ಕಾರಣವಾಯಿತು. ನಂತರ ಎನ್ ಎಸ್ ಎ ಮಟ್ಟದ ಮಾತುಕತೆ ತಡೆಯಲು ಪ್ರಯತ್ನ ನಡೆಯುತ್ತಿದೆ ಎಂದು ಸುಷ್ಮಾ ಸ್ವರಾಜ್ ಹೇಳಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited