ನವದೆಹಲಿ : ಜಮ್ಮು ಕಾಶ್ಮೀರದ ಪೂಂಜ್ ಜಿಲ್ಲೆಯ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಗುಂಡಿನ ದಾಳಿಗೆ 6 ನಾಗರೀಕರು ಸಾವನ್ನಪ್ಪಿದ್ದು,ಕನಿಷ್ಠ 15 ಜನರು ಗಾಯಗೊಂಡಿದ್ದಾರೆ.
ಭಾರೀ ಗುಂಡಿನ ದಾಳಿ ಮುಂದುವರಿದಿದ್ದು, ಗಡಿ ಪದೇಶದ ನಾಗರೀಕರನ್ನು ಸೇನೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಶನಿವಾರ ರಾತ್ರೆ 7 ಗಂಟೆಯಿಂದ ನಿಂತಿದ್ದ ಗುಂಡಿನ ದಾಳಿ ಮತ್ತೆ ರಾತ್ರೆ 12 ಗಂಟೆ ಸುಮಾರಿನಿಂದ ಮುಂದುವರಿದಿದೆ.
ಇದಕ್ಕೆ ಭಾರತೀಯ ಸೇನೆ ತಕ್ಕ ತಿರುಗೇಟು ನೀಡಿದೆ.
ಭಾರತ 69 ನೇ ಸ್ವಾಂತ್ರಂತ್ರ್ಯೋತ್ಸವ ಆಚರಿಸಿದ ದಿನವೇ ಪಾಕಿಸ್ತಾನ ತನ್ನ ಅಟ್ಟಹಾಸ ಮೆರೆದಿದೆ. ನವದೆಹಲಿಯಲ್ಲಿ ಆ. 23 ರಂದು ಎರಡೂ ದೇಶದ ರಾಷ್ಟ್ರೀಯ ಭದ್ರತೆಗೆ ಸಲಹೆಗಾರರ ಭೇಟಿ ನಿಗದಿಯಾಗಿದೆ.