ನವದೆಹಲಿ : 69 ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನೆರವೇರಿಸಿ ತಮ್ಮ ಎರಡನೇ ಸ್ವಾತಂತ್ರ್ಯೋತ್ಸವದ ಭಾಷಣ ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ಪ್ರಮುಖಾಂಶಗಳು ಇಂತಿವೆ.
ಭಾಷಣದ ಪ್ರಮುಖಾಂಶಗಳು ಃ
* ಭಾರತೀಯರಿಗೆ ಸ್ವಾತಂತ್ರ್ಯೋತ್ಸವದ ಶುಭಾಷಯಗಳು
* ಇದು ಸಾಮಾನ್ಯ ಬೆಳಗಲ್ಲ. ಈ ಬೆಳಗು 125 ಕೋಟಿ ಭಾರತೀಯರ ಕನಸು ಮತ್ತು ಆಕಾಂಕ್ಷೆಗಳನ್ನು ನಿರೀಕ್ಷಿಸುವ ಬೆಳಗಾಗಿದೆ.
* ನಾನು ಎಲ್ಲಾ ಸ್ವಾತಂತ್ರ ಹೋರಾಟಗಾರರಿಗೆ ನನ್ನ ನಮನ ಸಲ್ಲಿಸುತ್ತೇನೆ.
* ಪ್ರತಿ ಭಾರತೀಯರಲ್ಲಿ ಸರಳತೆ ಇದೆ ಮತ್ತು ದೇಶದ ಎಲ್ಲಾ ಮೂಲೆಗಳಲ್ಲೂ ಒಗ್ಗಟ್ಟಿದೆ, ಇದು ಭಾರತದ ಬಲವಾಗಿದೆ.
* ಒಗ್ಗಟ್ಟನ್ನು ನಾಶ ಮಾಡಿದರೆ, ದೇಶದ ಜನತೆಯ ಕನಸನ್ನು ನಾಶ ಮಾಡಿದಂತೆ.
* ಜಾತೀಯತೆ ಅಥವಾ ಕೋಮುವಾದಕ್ಕೆ ಇಲ್ಲಿ ಜಾಗವಿಲ್ಲ, ಯಾವುದೇ ರೀತಿ ಅವುಗಳನ್ನು ಸಹಿಸಲಾಗುವುದಿಲ್ಲ.
* 125 ಕೋಟಿ ಭಾರತೀಯರ ತಂಡವಿದೆ, ಇದು ದೇಶವನ್ನು ಕಟ್ಟುತ್ತದೆ ಮತ್ತು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ.
* ಜನರ ಭಾಗವಹಿಸುವೆಕೆ ಪ್ರಜಾಪ್ರಭುತ್ವದ ದೊಡ್ಡ ಆಸ್ತಿ.
* ನಮ್ಮ ಎಲ್ಲ ಯೋಜನೆಗಳು ಬಡವರನ್ನು ತಲುಪಬೇಕು.
* ಯಾರೂ ಬಡವರಾಗಿರಲು ಬಯಸುವುದಿಲ್ಲ, ಎಲ್ಲರೂ ಬಡತನದಿಂದ ಹೊರಬರಲು ಬಯಸುತ್ತಾರೆ. ಆದ್ದರಿಂದ ನಮ್ಮ ಎಲ್ಲ ಯೋಜನೆಗಳು ಬಡವರಿಗಾಗಿ ಇರಬೇಕು.
* ಬ್ಯಾಂಕಗಳ ಬಾಗಿಲು ಬಡವರಿಗೆ ತೆರದಿರಲಿಲ್ಲಿ. ನಾವು ಅದನ್ನು ಕೊನೆಗಾಣಿಸಲು ನಿರ್ಧರಿಸಿದೆವು. ಆರ್ಥಿಕ ಸೇರ್ಪಡೆಯನ್ನು ಬಲಗೊಳಿಸಲು ನಿರ್ಥರಿಸಿದೆವು. ಆರ್ಥಿಕ ವ್ಯವಸ್ಥೆಯಲ್ಲಿ ಬಡವರನ್ನು ಸೇರಿಸಲು ಬ್ಯಾಂಕ್ ಖಾತೆ ಅತ್ಯವಶ್ಯಕ.
* 17 ಕೋಟಿ ಜನ ಪ್ರಧಾನ ಮಂತ್ರಿ ಜನಧನ ಯೋಜನೆಯ ಅಡಿಯಲ್ಲಿ ಬ್ಯಾಂಕ್ ಖಾತೆ ತೆರೆದಿದ್ದಾರೆ.
* ಬ್ಯಾಂಕ್ ಶಾಖೆ ತೆರೆದಾಗ ಜನ ಹಿಗ್ಗುತ್ತಾರೆ ಅದರೆ ಅದು ಸುಲಭ. ಅದೇ ಜನರನ್ನು ಬ್ಯಾಂಕ್ ಗೆ ಕರೆತರುವುದು ಕಷ್ಟ.
* ಸಾಮಾಜಿಕ ಭದ್ರತೆಗೆ ಒತ್ತು ನೀಡಿದ್ದೇವೆ.ಪ್ರಧಾನಮಂತ್ರಿ ಭೀಮಾ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದ್ದೇವೆ. ನಾವು ಕೊಟ್ಟ ಭರವಸೆಯಂತೆ ಮಾಡಿದ್ದೇವೆ.
* ಕಳೆದ ವರ್ಷ ಕೆಂಪು ಕೋಟೆಯಿಂದ ಶೌಚಾಲಯ ಮತ್ತು ಸ್ವಚ್ಛತೆಯ ಬಗ್ಗೆ ಮಾತನಾಡಿದ್ದೆ, ಆಗ ಕೆಲವರು ಇವರೆಂತ ಪ್ರಧಾನಿ ಎಂದು ಹೇಳಿದ್ದರು.
* ಸ್ವಚ್ಛತೆಯ ಚಳುವಳಿ ಪ್ರತಿಯೊಬ್ಬರಿಗೂ ಮುಟ್ಟಿದೆ. ಎಲ್ಲಾ ಕ್ಷೇತ್ರದ ಜನರೂ ಇದರಲ್ಲಿ ಭಾಗವಹಿಸಿ, ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
* ಈ ಸ್ವಚ್ಛ ಭಾರತ ಅಭಿಯಾನಕ್ಕೆ ಹೆಚ್ಚು ಬಲ ಕೊಟ್ಟವರು ಯಾರು ? ಅದು ಭಾರತದ ಮಕ್ಕಳು.
* ಮುಂದಿನ 1000 ದಿನಗಳಲ್ಲಿ 18,500 ಹಳ್ಲಿಗಳಿಗೆ ವಿದ್ಯುತ್ ಒದಗಿಸಲು ಸರ್ಕಾರ ಪ್ರಯತ್ನಿಸುತ್ತದೆ.
* ಹೊಸ ಘೋಷ ವಾಕ್ಯ - ಸ್ಟಾರ್ಟ್ ಅಪ್ ಇಂಡಿಯಾ ಸ್ಟಾಂಡ್ ಅಪ್ ಇಂಡಿಯಾ
* ಕೃಷಿ ಮಂತ್ರಾಲಯವನ್ನು ಕೃಷಿ ಮತ್ತು ರೈತರ ಕಲ್ಯಾಣ ಎಂದು ಪುನರ್ ನಾಮಕರಣ ಮಾಡಬೇಕು.
* ಒಂದು ಶ್ರೇಣಿ , ಒಂದು ಪಿಂಚಣಿ ಯೋಜನೆಯನ್ನು ನಾವು ಒಪ್ಪಿದ್ದೇವೆ. ಇದರ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಧನಾತ್ಮಕ ಫಲಿತಾಂಶ ಬರುವ ನಿರೀಕ್ಷೆ ಇದೆ.
* 2022 ರ ಹೊತ್ತಿಗೆ ಒಂದು ಸಾಧನೆಗೆ ಗುರಿ ಇರಬೇಕು. ಭಾರತದ 75 ನೇ ಸ್ವಾತಂತ್ರ್ಯೋತ್ಸವ ಆಚರಿಸುವಾಗ ಈ ಸಾಧನೆಯನ್ನು ಮಾಡಿರಬೇಕು.
* 2022 ರ ಹೊತ್ತಿಗೆ ಭಾರತ ಸಂವೃದ್ಧವಾದ ರಾಷ್ಟ್ರವಾಗಬೇಕು.
* ವಂದೇ ಮಾತರಂ, ಭಾರತ್ ಮಾತಾಕೀ ಜೈ, ಜೈ ಹಿಂದ್.