ಶ್ರೀನಗರ : ಕಾಶ್ಮೀರದ ಶೋಪಿಯನ್ ಜಿಲ್ಲೆಯ ಮಸೀದಿಯೊಂದರ ಆವರಣದಲ್ಲಿ ಗುರುವಾರ ಸಂಭವಿಸಿದ ಗ್ರೆನೇಡ್ ಸ್ಪೋಟದಲ್ಲಿ ಕನಿಷ್ಠ 9 ಜನರು ಗಾಯಗೊಂದಿದ್ದಾರೆ.
ಜಾಮಿಯಾ ತ್ರೆನ್ಜ್ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಜನರು ಹೊರಗೆ ಬರುತ್ತಿರುವಾಗ ಈ ಘಟನೆ ಸಂಬವಿಸಿದೆ ಎಂದು ಮೂಲಗಳು ತಿಳಿಸಿವೆ.
'ನಿಮಾಜ್ಹಿಗಳು (ಪ್ರತಿನಿತ್ಯ ಪ್ರಾರ್ಥನೆ ಸಲ್ಲಿಸುವವರು) ಮಸೀದಿಯ ಆವರಣದಲ್ಲಿ ಕವಚಿಹಾಕಿದ್ದ ಲೋಹದ ಲೋಟವನ್ನು ನೋಡಿದ್ದಾರೆ. ಅದನ್ನು ಮಗುಚಿಹಾಕಲು ಪ್ರಯತ್ನಿಸಿದಾಗ ಅದರೊಳಗಿದ್ದ ಗ್ರೆನೇಡ್ ಸ್ಪೋಟಗೊಂಡಿದೆ' ಎಂದು ಅಧಿಕಾರಿಯಿಬ್ಬರು ಹೇಳಿದ್ದಾರೆ.
ಇದಕ್ಕೂ ಮುಂಚೆ, ಬುಧವಾರ ಖನ್ಯಾರ್ ಪ್ರದೇಶದಲ್ಲಿ ರಕ್ಷಣಾ ಪಡೆಯ ಪಹರೆ ತಂಡವೊಂದರ ಮೇಲೆ ಉಗ್ರಗಾಮಿಗಳು ಗ್ರೆನೇಡ್ ಎಸೆದ ಪರಿಣಾಮವಾಗಿ ಜಮ್ಮು ಕಾಶ್ಮೀರದ ಒಬ್ಬ ಪೊಲೀಸ್ ಅಧಿಕಾರಿ, ಇಬ್ಬರು ಸಿ.ಆರ್.ಪಿ.ಎಫ್ ಜವಾನರು ಮತ್ತು ಒಬ್ಬ ನಾಗರಿಕ ಗಾಯಗೊಂದಿದ್ದರು.