ಮುಂಬೈ : ಮಹಾರಾಷ್ಟ್ರ ರಾಜ್ಯದ ಸಮಾಜವಾದಿ ಪಾರ್ಟಿ ಉಪಾಧ್ಯಕ್ಷ, ಮಹಮದ್ ಫಾರೂಕ್ ಘೋಸಿ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ ಅವರಿಗೆ ಪತ್ರ ಬರೆದು, ಯಾಕೂಬ್ ಮೆಮೂನ್ ಹೆಂಡತಿಯನ್ನು ರಾಜ್ಯಸಭಾ ಸದಸ್ಯರನ್ನಗಿ ಮಾಡಿ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಕಾನೂನು ಯಾಕೂಬ್ ಗೆ ಶಿಕ್ಷೆ ವಿಧಿಸಿದೆ, ಅದರೆ ಅವನ ಹೆಂಡತಿ ಮತ್ತು ಮಗಳು ಮುಗ್ದರು. ನಾನು ಮುಲಾಯಜಿ ಅವರಿಗೆ ಪತ್ರದಲ್ಲಿ ಯಾಕೂಬ್ ನ ಹೆಂಡತಿಯನ್ನು ರಾಜ್ಯಸಭಾ ಸದಸ್ಯರನ್ನಗಿ ಮಾಡಿ ಎಂದು ಹೇಳಿದ್ದೇನೆ ಎಂದು ಫಾರೂಕ್ ಘೋಸಿ ಎ ನ್ ಐ ಗೆ ತಿಳಿಸಿದ್ದಾರೆ.
ಮುಲಾಯಂಜಿ ಅವರು ಯಾವಗಲೂ ಮುಸಲ್ಮಾನರ ಮತ್ತು ಸಮಾಜದ ಬಡವರ ಜೊತೆ ನಿಂತಿದ್ದಾರೆ, ಇದು ಓಂದು ಒೞೆಯ ಸಂದೇಶವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಮಹಮದ್ ಫಾರೂಕ್ ಘೋಸಿ ಅವರ ಈ ಹೇಳಿಕೆ ವಿವಾದ ಸೃಷ್ಠಿಸುವ ಸಾಧ್ಯತೆ ಇದೆ.
ಮುಂಬೈ ಸರಣಿ ಬಾಂಬ್ ಸ್ಪೋಟದ ವಿಚಾರದಲ್ಲಿ ಯಾಕೂಬ್ ಮೆಮೂನ್ ಗೆ ಗುರುವಾರ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ನಂತರ ಶುಕ್ರವಾರ, ಅವನ ದೇಹವನ್ನು ಮುಂಬಯಿಗೆ ತಂದು ಅಲ್ಲಿನ ಬಡಾ ಖಬರಿಸ್ತಾನ್ ಸ್ಮಶಾನದಲ್ಲಿ ಅಲ್ಲಿ ಹೂಳಲಾಯಿಗಿತ್ತು.