ನವದೆಹಲಿ : ಭಾನುವಾರ ರೇಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ತಮ್ಮ ಆಲೋಚನೆಗಳನ್ನು ದೇಶದ ಜನತೆಯ ಮುಂದೆ ಹಂಚಿಕೊಂಡರು.
ಪ್ರಧಾನಿ ಮನ್ ಕಿ ಬಾತ್ ಮುಖ್ಯಾಂಶಗಳು ಹೀಗಿವೆ :
* ಈ ವರ್ಷದ ಮುಂಗಾರು ಉತ್ತಮವಾಗಿ ಪ್ರಾರಂಭವಾಗಿದೆ. ಇದರಿಂದ ಖಂಡಿತವಾಗಿ ನಮ್ಮ ರೈತರಿಗೆ ಮುಂಗಾರು ಬೆಳೆ ಬೆಳೆಯಲು ಅನುಕೂಲವಾಗಲಿದೆ.
* ಕಾರ್ಗಿಲ್ ಯುದ್ಧದಲ್ಲಿ ಮಡಿದ ಎಲ್ಲಾ ಯೋಧರಿಗೆ ನನ್ನ ನಮನಗಳನ್ನು ಅರ್ಪಿಸುತ್ತೇನೆ.
* ಕಳೆದ ಒಂದು ವರ್ಷದಲ್ಲಿ ಸುಮಾರ 2 ಕೋಟಿಗೂ ಅಧಿಕ ಜನರು www.pmindia.gov.in ವೆಬ್ ಸೈಟ್ ಅನ್ನು ನೋಡಿದ್ದಾರೆ. ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅಗಸ್ಟ್ 15 ರ ರಂದು ನಾನು ಏನು ಭಾಷಣ ಮಾಡಬೇಂಕೆಂದು ಕೆಲವರು ತಮ್ಮ ಸಲಹೆಗಳನ್ನು ನೀಡಿದ್ದಾರೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ.
* ರಸ್ತೆ ಸುರಕ್ಷತೆಯ ಕುರಿತು ಸರ್ಕಾರ ಕೆಲವು ಯೋಜನೆಗಳನ್ನು ಜಾರಿಗೊಳಿಸಲಿದೆ. ಸರ್ಕಾರದ ಮಾತ್ರವಲ್ಲ, ತಮ್ಮ ತಮ್ಮ ಮನೆಯಲ್ಲಿ ಕಿರಿಯರಿಗೆ ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ನೀಡುವುದು ಎಲ್ಲಾ ಕುಟುಂಬಗಳ ಕರ್ತವ್ಯವಾಗಿದೆ.
* ಎಲ್ಲಾ ಕರ್ಮಚಾರಿ (ಕಾರ್ಮಿಕ) ಗಳೂ ಕರ್ಮ ಯೋಗಿಗಳಾಗಬೇಕು.
* ರೈಲ್ವೆ ಇಲಾಖೆಯ ಉದ್ಯೋಗಿ ಒಬ್ಬರು ರೈಲ್ವೆಗೆ ಸಂಬಂಧ ಪಟ್ಟ ಚಿತ್ರಗಳನ್ನು ಬಿಡಿಸುತ್ತಾರೆ ಎಂದು ನನಗೆ ಕೆಲವು ದಿನಗಳ ಹಿಂದೆ ತಿಳಿಯಿತು. ತಮ್ಮ ಕೆಲಸವನ್ನೇ ಹೆಚ್ಚು ಆಸಕ್ತಿದಾಯಕವಾಗಿ ಹೇಗೆ ನೋಡಬಹುದು ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ.
* ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆ ಬಹಳವಾಗಿದೆ. ಇದರಿಂದ ನಗರಗಳಲ್ಲಿರುವ ಸೌಕರ್ಯಗಳು ಹಳ್ಳಿಗಳಲ್ಲಿ ಸಿಗುತ್ತಿಲ್ಲ. ಸರ್ಕಾರ ಹಳ್ಳಿಗಳಲ್ಲಿ 24/7 ವಿದ್ಯುತ್ ಒದಗಿಸಲು ಪ್ರಯತ್ನಿಸುತ್ತಿದೆ.
* ಈಗಿನ ತಲೆಮಾರಿನವರು ವಿಜ್ನಾನ ಮತ್ತು ತಂತ್ರಜ್ನಾನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಇದು ಯೋಚನೆ ಮಾಡಬೇಕಾದ ವಿಷಯವಾಗಿದೆ. ನೂರರಲ್ಲಿ ಒಬ್ಬರು ಮಾತ್ರ ತಾನು ವಿಜ್ನಾನಿಯಾಗಬೇಕೆಂಬ ಆಸೆ ಇದೆ ಎನ್ನುತ್ತಾರೆ,